ಕಾಡ್ಗಿಚ್ಚಿನಿಂದ ಮೃತಪಟ್ಟ ಅರಣ್ಯ ವೀಕ್ಷಕ ಸುಂದರೇಶ್ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ: ಸಚಿವ ಮಾಧುಸ್ವಾಮಿ

Update: 2023-02-21 12:16 GMT

ಬೆಂಗಳೂರು, ಫೆ. 21: ‘ಹಾಸನ ಜಿಲ್ಲೆ ಸಕಲೇಶಪುರ ಅರಣ್ಯದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಕಾಡ್ಗಿಚ್ಚಿನಿಂದ ಮೃತಪಟ್ಟಿರುವ ಸುಂದರೇಶ್ ಕುಟುಂಬಕ್ಕೆ 50ಲಕ್ಷ ರೂ.ಪರಿಹಾರ ನೀಡಲಾಗಿದೆ. ಮೃತರ ಪತ್ನಿಗೆ ಸರಕಾರಿಉದ್ಯೋಗ ನೀಡಲಾಗುವುದು’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಸಿಎಂ ಪರವಾಗಿ ಉತ್ತರಿಸಿದ ಅವರು, ‘ಕಾಡ್ಗಿಚ್ಚಿನಿಂದಾಗಿ ಮೃತಪಟ್ಟು ಸಂಕಷ್ಟಕ್ಕೀಡಾಗಿರುವ ಸುಂದರೇಶ್ ಕುಟುಂಬದ ಬೆಂಬಲಕ್ಕೆ ಸರಕಾರ ನಿಂತಿದೆ. ಕಾಡಿನ ಬೆಂಕಿ ಅವಘಡಗಳಲ್ಲಿ ಮೃತಪಟ್ಟವರಿಗೆ ನೀಡುತ್ತಿದ್ದ 30ಲಕ್ಷ ರೂ.ಪರಿಹಾರದ ಬದಲಿಗೆ 50ಲಕ್ಷ ರೂ.ನೀೀಡಲಾಗಿದೆ. ಕಾಡ್ಗಿಚ್ಚಿನಲ್ಲಿ ಗಾಯಗೊಂಡ ಮತ್ತೊಬ್ಬರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ’ ಎಂದರು.

Similar News