ನಾನು ಎಂದೂ ದುರ್ಬಲ ಗೃಹ ಸಚಿವನಲ್ಲ: ಆರಗ ಜ್ಞಾನೇಂದ್ರ

ಸಿದ್ದರಾಮಯ್ಯ, ಎಚ್ ಡಿಕೆ ನನ್ನ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ, ಆದರೆ...

Update: 2023-02-24 13:54 GMT

ಬೆಂಗಳೂರು, ಫೆ.24: ಗಂಭೀರ ವಿವಾದಗಳನ್ನು ಸಮರ್ಥವಾಗಿ ನಿಭಾಯಿಸಿರುವ ತೃಪ್ತಿ ಇದ್ದು, ನಾನು ಎಂದೂ ದುರ್ಬಲ ಗೃಹ ಸಚಿವನಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ 15ನೆ ವಿಧಾನಸಭೆಯ ಹಾಗೂ ಬಜೆಟ್ ಅಧಿವೇಶನದ ಕೊನೆಯ ದಿನ ವಿದಾಯ ಭಾಷಣ ಮಾಡಿದ ಅವರು, ವಿರೋಧ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ಪ್ರೀತಿ ತೋರಿ ಒಳ್ಳೆಯ ಮಾತುಗಳನ್ನಾಡಿ ಪ್ರೋತ್ಸಾಹಿಸಿದ್ದಾರೆ. ಆದರೆ, ರಾಜಕೀಯವಾಗಿ ನಾನೊಬ್ಬ ದುರ್ಬಲ ಗೃಹ ಸಚಿವರೆಂದು ಟೀಕಿಸಿದ್ದಾರೆ. ಅವರ ಟೀಕೆಗಳಿಂದಲೂ ನಾನು ಕಲಿತದ್ದು ಬಹಳಷ್ಟಿದೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು, ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು ನೋವು ತಂದಿದೆ. 1983ರಿಂದ ಅವರೊಂದಿಗಿನ ಒಡನಾಟ ಇದ್ದು, ಅವರ ಜತೆಯಲ್ಲೇ ರಾಜಕೀಯವಾಗಿ ಬೆಳೆದು ಬಂದಿದ್ದೇನೆ ಎಂದ ಅವರು, ಸದನದಲ್ಲಿ ಚರ್ಚೆಯಾಗುವ ವಿಚಾರಗಳು ನಮ್ಮ ಸಾರ್ವಜನಿಕ ಜೀವನಕ್ಕೆ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು.

Similar News