ಬಡವರ ಕಲ್ಯಾಣ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಮಧು ಬಂಗಾರಪ್ಪ

Update: 2023-03-07 17:02 GMT

ಶಿವಮೊಗ್ಗ, ಮಾ.7: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಮಗನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ.ಆದರೂ ಮಾಡಾಳ್ ವಿರೂಪಾಕ್ಷಪ್ಪನ ಬಂಧನ ಯಾಕಿಲ್ಲ ಎಂದು ಎಐಸಿಸಿ ಸದಸ್ಯ ಮಧು ಬಂಗಾರಪ್ಪ ಪ್ರಶ್ನಿಸಿದರು.

ಶಿವಮೊಗ್ಗ ತಾಲೂಕಿನ ಹೊಳೆ ಬೆನವಳ್ಳಿ ಗ್ರಾಮದಲ್ಲಿ  ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಗ್ಯಾರಂಟಿ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕರ ಮಗನ ಬಳಿ  ಕೋಟಿಗಟ್ಟಲೆ ಹಣ ಸಿಕ್ಕಿದೆ ಅಂದ ಮೇಲೆ ಶಾಸಕರು ಎಷ್ಟು ಕೊಳ್ಳೆ ಹೊಡೆದಿರಬಹುದು ಎಂದ ಅವರು,ಪ್ರಕರಣ ಬೆಳಕಿಗೆ ಬಂದ ನಂತರ ಸಿಎಂ ಬಳಿ ಶಾಸಕರು ಪ್ರತ್ಯಕ್ಷ ರಾಗಿದ್ದರು ಅವರನ್ನು ಯಾಕೆ ಬಂಧಿಸಿಲ್ಲ, ಕಾನೂನಲ್ಲಿ ಅವಕಾಶವಿಲ್ಲವಾ.ಸರ್ಕಾರವೇ ಇವರನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯವರು ಜಾತಿ ಧರ್ಮದ ಮೇಲೆ ಸಮಾಜ ಒಡೆಯುತ್ತಾರೆ.ಇವರಿಗೆ ಮತ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಎಲ್ಲ ಪಕ್ಷದವರು ಬಂದು ಮತ ಕೇಳುತ್ತಾರೆ.ಆದರೆ ಬಡವರ ಪರವಾಗಿ ನಿಲ್ಲುವ ಏಕೈಕ ಪಕ್ಷ  ಕಾಂಗ್ರೆಸ್ ಮಾತ್ರ.ಹಾಗಾಗಿ ಈ ಬಾರಿ  ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಭೂಮಿ ಹಕ್ಕು ನೀಡಿದೆ.ಆದರೆ ಬಿಜೆಪಿಯವರು ಕಾಂಗ್ರೆಸ್‌ನವರು ಕೊಟ್ಟ ಭೂಮಿಯ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದ ಅವರು,ಬಂಗಾರಪ್ಪನವರು ಮುಖ್ಯಮಂತ್ರಿ ಆದ ಅವಧಿಯಲ್ಲಿ ಆಶ್ರಯ ಮನೆ  ನೀಡುವ ಮೂಲಕ ಬಡವರ ಕಲ್ಯಾಣ  ಮಾಡಿದ್ದರು, ಆದರೆ ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ಮನೆ ಹಂಚಿಕೆ ಮಾಡಿಲ್ಲ.ಯಾಕೆಂದರೆ 40% ಕಮಿಷನ್ ಸಿಗಲ್ಲ ಹಾಗಾಗಿ ಹಂಚಿಕೆ ಮಾಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶಕ್ಕೆ 7 ತಾಸು ವಿದ್ಯುತ್ ನೀಡುತ್ತಿಲ್ಲ. ನರೇಂದ್ರ ಮೋದಿ 15 ಲಕ್ಷ ಹಾಕುತ್ತೇನೆ ಎಂದು ಹೇಳಿ ಮತ ಪಡೆದುಕೊಂಡ್ರು ಆದರೆ 15  ಪೈಸ್ ಕೊಟಿಲ್ಲ.ಬರೀ ಸುಳ್ಳು ಹೇಳುತ್ತಿದ್ದಾರೆ.ಬಿಜೆಪಿಯ ಸುಳ್ಳಿನ ಖಜಾನೆ ಖಾಲಿಯಾಗಿದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕಾಂಗ್ರೆಸ್ ಭೂಮಿ ಹಕ್ಕು  ಕೊಟ್ಟಿತ್ತು.ಆದರೆ ಬಿಜೆಪಿಗರು ಅದನ್ನು ಕಿತ್ತುಕೊಂಡರು.ಸಂತ್ರಸ್ತರು ಕೊಟ್ಟ ಬೆಳಕಲ್ಲೇ ಪ್ರಧಾನಿ ನರೇಂದ್ರ  ಮೋದಿ ಅವರು ಅವರ ಅದ್ದೂರಿ ಕಾರ್ಯಕ್ರಮ ಆಯ್ತು.ಆದರೆ ಸಂತ್ರಸ್ತರ ಬಗ್ಗೆ ತುಟಿ ಪಿಟಕ್ ಅನ್ನಲಿಲ್ಲ.ಏರ್ಪೋರ್ಟ್ ಗೆ ಜಾಗ ನೀಡಿದವರನ್ನು ಮಾತನಾಡಿಸಿಲ್ಲ.ಬಿಜೆಪಿ ಕೊಡುವುದು ಕೇವಲ ಭರವಸೆ ಆದ್ರೆ, ಕಾಂಗ್ರೆಸ್ ಗ್ಯಾರಂಟಿ ಕೊಡ್ತಿದೆ ಎಂದರು.

 ಜಿಲ್ಲಾ ಪ್ರಚಾರ ಸಮಿತಿ  ಅಧ್ಯಕ್ಷ ಎನ್.ರಮೇಶ್  ಮಾತನಾಡಿ,ಹೆಣ್ಣು ಮಕ್ಕಳು ಕಾಂಗ್ರೆಸ್ ಪಕ್ಷದ ಭರವಸೆ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರ ಕಾರ್ಯಕ್ರಮ ಕೊಡುವುದಾಗಿ ಭರವಸೆ ನೀಡಿದ್ದರು.ಆದರೆ ಬಡವರ ಕಾರ್ಯಕ್ರಮ ನೀಡಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಿದ್ದಾರೆ ಎಂದ ಅವರು,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ.ಗೃಹ ಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ ವಿತರಣೆ ಆಗಲಿದೆ ಎಂದರು.
ವಿ.ನಾರಾಯಣ ಸ್ವಾಮಿ ಮಾತನಾಡಿ,ಸ್ವಾತಂತ್ರ ನಂತರ ಬಡವರ ಪರವಾಗಿ ರಚನಾತ್ಮಕವಾಗಿ ಕೆಲಸ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.

ಆಶ್ರಯ ನಿವೇಶನ,ಆರಾಧಾನ,ಗ್ರಾಮೀಣ ಕೃಪಾಂಕ ಸೇರಿದಂತೆ ಬಡವರ ಪರವಾಗಿ ಸಾಕಷ್ಡು ಕೆಲಸ ಮಾಡಿದೆ.ಈ ಭಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್,ಕಾಂಗ್ರೆಸ್ ಮುಖಂಡರಾದ  ವಿಜಯ್ ಕುಮಾರ್,ಡಾ ಶ್ರೀನಿವಾಸ್ ಕರಿಯಣ್ಣ,ಎಸ್.ಪಿ ದಿನೇಶ್,ವೇದಾ ವಿಜಯಕುಮಾರ್,ಜಿ.ಡಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತು.ಸಿರಿಗೆರೆ ನಾಗರಾಜ್ ಸೇರಿದಂತೆ ಹಲವರಿದ್ದರು.

Similar News