ಹಾಸನ: 'EWS 10% ಮೀಸಲಾತಿ ಮಹಾವಂಚನೆ' ಪುಸ್ತಕ ಬಿಡುಗಡೆ, ಸಂವಾದ

Update: 2023-03-12 07:44 GMT

ಹಾಸನ, ಮಾ.12: ಮಾನವ ಬಂಧುತ್ವ ವೇದಿಕೆ, ದಸಂಸ (ಅಂಬೇಡ್ಕರ್ ವಾದ) ಮತ್ತು ಹಾಸನ ಜಿಲ್ಲಾ ಸಂಚಾಲನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 'EWS 10% ಮೀಸಲಾತಿ ಮಹಾವಂಚನೆ' ಪುಸ್ತಕ ಬಿಡುಗಡೆ, ಚರ್ಚೆ, ಸಂವಾದ ಕಾರ್ಯಕ್ರಮವು ಶನಿವಾರ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜರುಗಿತು.

ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ EWS ಎಂಬ ಕ್ರಾಂತಿ ಕುರಿತು ಚರ್ಚೆ ನಡೆಯಿತು. ಚಾತುರ್ವರ್ಣವನ್ನು ಮರಳಿ ಜಾರಿಗೊಳಿಸುವ ಬ್ರಾಹ್ಮಣಶಾಹಿ ನೀತಿಯ ಸಂವಿಧಾನ ವಿರೋಧಿ ನಿಲುವುಗಳ ಕುರಿತು ಚರ್ಚೆ ನಡೆಯಿತು. ಹಿಂದುಳಿದ ಸಮುದಾಯಗಳು ಇದರ ಕುರಿತು ಮತ್ತಷ್ಟು ಜಾಗೃತರಾಗಿ ಮಾತನಾಡಬೇಕು. EWS ವಿರುದ್ಧ  ಜನಾಂದೋಲನ ರೂಪಿಸಬೇಕು ಎಂದು ಒಮ್ಮತದಿಂದ ತೀರ್ಮಾನಿಸಲಾಯಿತು.

ಮಾವಳ್ಳಿ ಶಂಕರ್, ಬಿ. ಶ್ರೀಪಾದ ಭಟ್, ಎ.ಬಿ.ರಾಮಚಂದ್ರಪ್ಪ, ಇವಾನ್ ಡಿಸಿಲ್ವ, ಸತೀಶ್ ಕುಮಾರ್, ಶಾಂತಾ ಮೇಡಂ, ಅಂಬಗ ಮಲ್ಲೇಶ್, ರಂಗಸ್ವಾಮಿ, ಗೋವಿಂದರಾಜು, ಜಯಕುಮಾರ್ ಮುಂತಾದವರು ಭಾಗವಹಿಸಿದ್ದರು.

Similar News