ಕಾಂಗ್ರೆಸ್‌ ನನಗೆ ಸಮಾಧಿ ಕಟ್ಟಲು ನೋಡಿದರೆ, ನಾನು ರಸ್ತೆ ಅಭಿವೃದ್ಧಿಯಲ್ಲಿ ನಿರತನಾಗಿದ್ದೇನೆ: ಪ್ರಧಾನಿ ಮೋದಿ

Update: 2023-03-12 09:25 GMT

ಮಂಡ್ಯ:  ''ಕಾಂಗ್ರೆಸ್‌ ನನಗೆ ಸಮಾಧಿ ಕಟ್ಟುವುದರಲ್ಲಿ ತೊಡಗಿಸಿಕೊಂಡಿದೆ. ಆದರೆ ನಾನು ಬೆಂಗಳೂರು-ಮೈಸೂರು ರಸ್ತೆಯ ಅಭಿವೃದ್ಧಿಯಲ್ಲಿ ನಿರತನಾಗಿದ್ದೇನೆ. ದೇಶದ ಪ್ರತಿಯೊಬ್ಬರ ಆಶೀರ್ವಾದವೇ ನನಗೆ ರಕ್ಷಾ ಕವಚ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ''ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ'' ಎಂದು ಅಭಿಪ್ರಾಯ ಪಟ್ಟರು. 

''2022 ರಲ್ಲಿ ಭಾರತಕ್ಕೆ ದಾಖಲೆ ಪ್ರಮಾಣದ ವಿದೇಶಿ ಹೂಡಿಕೆ ಬಂದಿದೆ. ಇದರಲ್ಲಿ ಕರ್ನಾಟಕಕ್ಕೆ ಅಪಾರ ಲಾಭವಾಗಿದೆ. ಕರ್ನಾಟಕದಲ್ಲಿ ಐಟಿಯಲ್ಲದೆ ಬಯೊಟೆಕ್ನಾಲಜಿಯಲ್ಲದೆ, ರಕ್ಷಣೆ, ಕೆಮಿಕಲ್‌ ಕ್ಷೇತ್ರದಲ್ಲೂ ಅಭೂತಪೂರ್ವ ಸಾಧನೆ ಮಾಡುತ್ತಿದೆ. ಇದು ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ'' ಎಂದು ಹೇಳಿದರು. 

Similar News