ಎಚ್‍ಡಿಕೆ ತಮ್ಮ ಪುತ್ರನಿಗಾಗಿ ನನ್ನನ್ನು ಬಲಿ ಕೊಟ್ಟರು: ಮಾಜಿ ಸಂಸದ ಶಿವರಾಮೇಗೌಡ

Update: 2023-03-12 17:57 GMT

ಬೆಂಗಳೂರು, ಮಾ, 12: ‘ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರನಿಗಾಗಿ ನನ್ನನ್ನು ಬಲಿಕೊಟ್ಟರು. ಜತೆಗೆ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಬಲಿಕೊಟ್ಟರು. ಆದರೆ, ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಬಗ್ಗೆ ನನಗೆ ಗೌರವವಿದೆ’ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಹೆಸರು ಹೇಳಿಕೊಂಡು ಬೆಳೆದು, ಒಕ್ಕಲಿಗರಿಗೆ ಚೂರಿ ಹಾಕುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಈ ವಿಚಾರವನ್ನು ಜನರೇ ಮಾತನಾಡುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಪರಾಭವಗೊಂಡಿರುವುದಕ್ಕೆ ನೋವಿಲ್ಲ. ಆದರೆ, ದೇವೇಗೌಡರು ಸೋತಿದ್ದು ಬೇಸರ ತಂದಿದೆ ಎಂದು ಹೇಳಿದರು.

ಕುಮಾರಸ್ವಾಮಿ ದೊಡ್ಡವರು, ಮಾಜಿ ಮುಖ್ಯಮಂತ್ರಿ, ಅವರು ಏನು ಮಾತನಾಡಿದರು ನಡೆಯುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ನನಗೆ ಟಿಕೆಟ್ ಕೊಡಬಹುದು. ಜೆಡಿಎಸ್ ಪಕ್ಷದ ಬಗ್ಗೆ ನನಗೆ ವಿರೋಧವಿಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಮಾತ್ರವೇ ನನ್ನ ವಿರೋಧ’ ಎಂದು ಶಿವರಾಮೇಗೌಡ ನುಡಿದರು.

Similar News