ದಾವಣಗೆರೆ: ಪಂಚರತ್ನ ಸಿರಿಧಾನ್ಯಗಳ ಮಿಶ್ರಣ ಉತ್ಪನ್ನ ಬಿಡುಗಡೆ

Update: 2023-03-13 15:18 GMT

ದಾವಣಗೆರೆ: ನಗರದ ಸದ್ಯೋಜಾತ ಮಠದಲ್ಲಿ 'ದೇಶಿ ಆಹಾರ ಸಂಪೂರ್ಣ ಆರೋಗ್ಯ ಸಿರಿಧಾನ್ಯಗಳು ಮತ್ತು ಕಷಾಯಗಳ ಕುರಿತು ಉಪನ್ಯಾಸ ಮತ್ತು ಸನ್ಮಾನ' ಕಾರ್ಯಕ್ರಮ ನಡೆಯಿತು.

ಪದ್ಮಶ್ರೀ ಪುರಸ್ಕೃತ ಡಾ.ಖಾದರ್ ಅಲಿ ಅವರು ಉಪನ್ಯಾಸ ನೀಡಿದರು. ಪಂಚರತ್ನ ಸಿರಿಧಾನ್ಯಗಳ ಮಿಶ್ರಣ ಉತ್ಪನ್ನ ಬಿಡುಗಡೆಗೊಳಿಸಿದರು.

ಈ ಉತ್ಪನ್ನದಲ್ಲಿ ಸಿರಿಧಾನ್ಯಗಳಾದ ಸಾಮೆ, ನವಣೆ,ಹಾರಕ , ಊದಲು, ಮತ್ತು ಕೊರಲೆ ಉತ್ಪನ್ನಗಳ ಮಿಶ್ರಣ  ಪ್ರತ್ಯೇಕ ಎರಡು ನೂರು ಗ್ರಾಂಗಳಲ್ಲಿ ಒಳಗೊಂಡಂತೆ ಒಂದು ಕೆ.ಜಿಯ ಸಿರಿಧಾನ್ಯಗಳ ಮಿಶ್ರಣವಾಗಿರುತ್ತವೆ.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಆರ್ ತಿಪ್ಪೇಸ್ವಾಮಿ, ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ, ಸಾವಯವ ಒಕ್ಕೂಟದ ಅಧ್ಯಕ್ಷ ಕೃಪ ಟಿ,ಒಕ್ಕೂಟದ ಸಿಇಒ ಕರಿಯಪ್ಪ ಅಡಳಿತ ಮಂಡಳಿ ಸದಸ್ಯರು ಇದ್ದರು.

Similar News