ಸಾಗರ: ತೋಟದಲ್ಲಿ ಬೆಳೆದಿದ್ದ 10 ಗಾಂಜಾ ಗಿಡ ವಶಕ್ಕೆ

Update: 2023-03-14 16:53 GMT

ಸಾಗರ : ತಲೂಕಿನ ಕಟ್ಟಿನಕಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಡ್ಡೆಹಳ್ಳಿ-ಕಾನೂರು ಗ್ರಾಮದಲ್ಲಿ ಗಾಂಜಾ ಬೆಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಮಂಗಳೂರು ಅಬ್ಕಾರಿ ಜಂಟಿ ಆಯಕ್ತರ ನೇತೃತ್ವದಲ್ಲಿ ಜಿಲ್ಲಾ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ನಾರಾಯಣ ಬಿನ್ ಜಟ್ಟಾ ನಾಯ್ಕ ಅವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ 10 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಅಬ್ಕಾರಿ ನಿರೀಕ್ಷಕ ಸಂದೀಪ್, ಉಪ ನಿರೀಕ್ಷಕಿ ವಿನ್ನಿ ಲೋಬೋ, ಸಿಬ್ಬಂದಿಗಳಾದ ದೀಪಕ್, ಮಹಾಬಲೇಶ್, ಚಾಲಕ ಗಣಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Similar News