ಬಾವಿ ನೀರಿಗೆ ವಿಷ ಬೆರೆಸಿದ ದುಷ್ಕರ್ಮಿಗಳು: ದೂರು ದಾಖಲು

Update: 2023-03-17 14:04 GMT

ಸಕಲೇಶಪುರ: ಸಕಲೇಶಪುರ ತಾಲೂಕಿನ ವಳಲಹಳ್ಳಿ ಗ್ರಾಮಪಂಚಾಯತ್‌ನ ಹಿರಿಯೂರು ಗ್ರಾಮದ ವಳಲಹಳ್ಳಿ ಕೂಡಿಗೆಯಲ್ಲಿ ಕುಡಿಯುವ ನೀರಿನ ಬಾವಿಗೆ ದುಷ್ಕರ್ಮಿಗಳು ವಿಷ ಬೆರೆಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಗ್ರಾಮದ ಗೋಪಾಲಕೃಷ್ಣ (ಗೋಪಿ)ಎಂಬವರಿಗೆ ಸೇರಿದ ಬಾವಿಯಾಗಿದ್ದು, ಮನೆ ಬಳಕೆಗೆ ನೀರನ್ನು ಪಂಪ್‌ನಿಂದ ತೆಗೆದಾಗ ಬಾವಿ ನೀರು ನೀಲಿ ಬಣ್ಣದಿಂದ ಕೂಡಿದ್ದು, ನೊರೆ ಕಂಡು ಬಂದಿದೆ. ಈ ಪಾತ್ರೆಗಳಿಗೆ ತುಂಬಿಸಿ ನೋಡಿದಾಗ ವಾಸನೆ ಹಾಗೂ ನೊರೆ ಹೆಚ್ಚಾಗಿದೆ. ಈ ವೇಳೆ ಗೋಪಾಲಕೃಷ್ಣ ಅವರು ಬಾವಿಯ ಹತ್ತಿರ ನೋಡಿದಾಗ ಸುತ್ತಲೂ ಬಿಳಿಯ ಬಣ್ಣದ ಪೌಡರ್ ಬಿದ್ದಿರುವುದು ಕಾಣಿಸಿರುವುದಾಗಿ ತಿಳಿದುಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಗೋಪಾಲಕೃಷ್ಣ  ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಿಡಿಗೇಡಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Similar News