ಕಾಂಗ್ರೆಸ್ ಸೇರುವ ವಿಷಯ ಮುಗಿದ ಅಧ್ಯಾಯ, ಅದು ನನ್ನ ತಲೆಯಲ್ಲೇ ಇಲ್ಲ: ಸಚಿವ ವಿ.ಸೋಮಣ್ಣ
Update: 2023-03-20 11:31 GMT
ಚಾಮರಾಜನಗರ: 'ಕಾಂಗ್ರೆಸ್ ಸೇರ್ಪಡೆ ವಿಚಾರ ಮುಗಿದ ಅಧ್ಯಾಯ. ಅದು ನನ್ನ ತಲೆಯಲ್ಲೇ ಇಲ್ಲ' ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನೊಬ್ಬ ನೇರ ರಾಜಕಾರಣಿ. ಏನಿದ್ದರೂ ನೇರವಾಗಿ ಹೇಳುತ್ತೇನೆ. ಕ್ಷುಲ್ಲಕ ವಿಚಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಎರಡು ತಿಂಗಳಿಂದ ನನ್ನನ್ನು ಮಾಧ್ಯಮದವರು ಉಜ್ಜುತ್ತಾ ಇದ್ದೀರಿ ಎಷ್ಟು ಉಜ್ಜಬೇಕೋ ಉಜ್ಜಿಕೊಳ್ಳಿ' ಎಂದರು.
'ಚಾಮರಾಜನಗರ ಜಿಲ್ಲೆಯ ಸ್ಪರ್ಧಿಸುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಚಾಮರಾಜನಗರ ಜಿಲ್ಲೆ ನನ್ನ ಪ್ರೀತಿಯ ಜಿಲ್ಲೆ. ಆದರೆ ಇಲ್ಲಿ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ. ಈ ಬಗ್ಗೆ ಪಕ್ಷದ ತೀರ್ಮಾನವೇ ಅಂತಿಮ' ಎಂದು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಸೋಮಣ್ಣ ಅವರು ಸ್ಪಷ್ಟಪಡಿಸಿದರು.