ಪಾಕಿಸ್ತಾನದ ಜನರು ಮೋದಿಯಂತಹ ನಾಯಕರನ್ನು ಬಯಸುತ್ತಿದ್ದಾರೆ: ಪರಿಷತ್ ಸದಸ್ಯ ಲಕ್ಷ್ಮಣ ಸವದಿ

Update: 2023-03-21 14:52 GMT

ವಿಜಯಪುರ, ಮಾ. 21: ‘ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿಯೂ ಬಿಜೆಪಿ ಬಾವುಟ ಹಾರಾಡಿದ್ದನ್ನು ನೋಡಿದ್ದೇವೆ. ಪಾಕಿಸ್ತಾನದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕು ಹಾಗೂ ಮೋದಿಯಂತಹ ನಾಯಕ ಬೇಕೆನ್ನುವುದನ್ನು ಅಲ್ಲಿನ ಜನ ಬಯಸುತ್ತಿದ್ದಾರೆಂಬುದನ್ನು ತೋರಿಸುತ್ತದೆ’ ಎಂದು ಪರಿಷತ್ ಸದಸ್ಯ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಎಂದರೆ ಜಗತ್ತಿನ ದೊಡ್ಡಣ್ಣನಿಂದ ಹಿಡಿದು ಎಲ್ಲ ದೇಶ ನಾಗರಿಕರಿಗೆ ಅಚ್ಚುಮೆಚ್ಚು. ಈ ಮೊದಲು ಭಾರತವನ್ನು ಭಿಕ್ಷುಕರ, ಬಡವರ ದೇಶ ಎಂದು ಹೀಯಾಳಿಸುತ್ತಿದ್ದರು. ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಅಮೆರಿಕ ಗೌರವ ನೀಡುತ್ತಿದೆ’ ಎಂದು ನುಡಿದರು.

‘ನಮ್ಮ ನಾಲ್ಕನೆ ತಂಡದ ಕೊನೆಯ ಮತಕ್ಷೇತ್ರ ಇಂಡಿಯಲ್ಲಿ ಯಾತ್ರೆ ಕೊನೆಗೊಳ್ಳುತ್ತಿದ್ದು, ಮಾ.25ಕ್ಕೆ ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮ ನಡೆಯಲಿದೆ. ಅಂದು ಪ್ರಧಾನಿ ಮೋದಿಯವರು ಭಾಗಿಯಾಗಲಿದ್ದಾರೆ ಎಂದ ಅವರು, 2023ರ ವಿಧಾನಸಭೆ ಹಾಗೂ 2024ರ ಲೋಕಸಭೆಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಜನತೆ ಸಂಕಲ್ಪ ಮಾಡುವ ಯಾತ್ರೆ ಇದಾಗಿದೆ ಎಂದರು.

ಇದನ್ನೂ ಓದಿ: ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ: ಬಿಜೆಪಿ MLC ಲಕ್ಷ್ಮಣ ಸವದಿ

Similar News