ಯುದ್ಧಕ್ಕೂ ಮುನ್ನವೇ ಸಿದ್ದರಾಮಯ್ಯರನ್ನು ಸ್ವಪಕ್ಷೀಯ ನಾಯಕರು ಸೋಲುಣಿಸಿ ಪುನಃ ಮನೆಗೆ ಕಳುಹಿಸಿದ್ದಾರೆ: ಬಿಜೆಪಿ

Update: 2023-03-22 08:44 GMT

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧಿಸಬೇಡಿ ಮತ್ತು ವರುಣಾದಂತಹ ಸುರಕ್ಷಿತ ಸ್ಥಾನವನ್ನು ಆಯ್ಕೆ ಮಾಡಿ ಎಂದು ಸೂಚನೆ ನೀಡಿದೆ ಎಂಬ ವದಂತಿಯು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ಈ ಕುರಿತಾಗಿ ಟ್ವೀಟ್ ಮಾಡಿರುವ ಬಿಜೆಪಿ (@BJP4Karnataka), ''ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದಂತೆ ಸಿದ್ದರಾಮಯ್ಯನವರು ಕೋಲಾರದಲ್ಲಿ ವಾರ್ ಶುರುವಾಗುವುದಕ್ಕೂ ಮುನ್ನ ವಾರ್ ರೂಂ ಉದ್ಘಾಟನೆ ಮಾಡಿ ಗರ್ವಭಂಗಕ್ಕೆ ಒಳಗಾಗಿದ್ದಾರೆ'' ಎಂದು ಹೇಳುವ ಮೂಲಕ ಕಾಳೆಲೆದಿದೆ. 

''ಯುದ್ಧಕ್ಕೂ ಮುನ್ನವೇ ಸ್ವಪಕ್ಷೀಯ ನಾಯಕರು ಸೋಲುಣಿಸಿ ಪುನಃ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ'' ಎಂದು ಬಿಜೆಪಿ ಆರೋಪಿಸಿದೆ. 

Similar News