ಕೋಲಾರ: ಚಾಕುವಿನಿಂದ ಇರಿದು ತಂದೆಯಿಂದಲೇ ಮಗನ ಕೊಲೆ

Update: 2023-03-28 17:11 GMT

ಕೋಲಾರ,ಮಾ.28:  ಚಾಕುವಿನಿಂದ ಇರಿದು ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.

ಭುವನ್ (9) ಮೃತ ಬಾಲಕನಾಗಿದ್ದು, ಬಾಲಸುಬ್ರಹ್ಮಣ್ಯಂ ಕೊಲೆಗೈದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಸುಬ್ರಮಣ್ಯಂ ತನ್ನ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ‌ ಬಂದಿದ್ದನು. ಭುವನ್ ನಂಗಲಿಯ ಅಜ್ಜಿ ಮನೆಯಲ್ಲಿ ವಾಸವಾಗಿದ್ದ. ನಿನ್ನೆ ನಂಗಲಿ ಮನೆಗೆ ಬಂದಿರುವ ಸುಬ್ರಮಣ್ಯಂ ಮಗ ಭುವನ್‌ನನ್ನು ಬೆಂಗಳೂರಿಗೆ ಹೋಗೋಣ ಬಾ ಎಂದು ಕರೆದಿದ್ದಾನೆ. ಆದರೆ ಮಗ ಭುವನ್ ನಿರಾಕರಿಸಿದ್ದಾನೆನ್ನಲಾಗಿದ್ದು, ಇದರಿಂದ ಕೋಪಗೊಂಡ ಆರೋಪಿಯು ಮುಂಜಾನೆ ವೇಳೆ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. 

ಮಗುವಿನ ಚೀರಾಟ ಕಂಡ ಅಕ್ಕ ಪಕ್ಕದವರು ಆರೋಪಿ ತಂದೆಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Similar News