ತಂದೆ ನಮ್ಮ ಜೊತೆ ರಾಜಕಾರಣದ ಬಗ್ಗೆ ಮಾತನಾಡುತ್ತಿರಲಿಲ್ಲ: ಧ್ರುವನಾರಾಯಣ ಪುತ್ರ ದರ್ಶನ್

''ಜನಸೇವೆ ಮಾಡಲು ಅವಕಾಶ ಮಾಡಿಕೊಡಿ...''

Update: 2023-03-28 17:22 GMT

ಮೈಸೂರು,ಮಾ.28: ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಧ್ರುವನಾರಾಯಣ ನೆನೆದು ಕಾಂಗ್ರೆಸ್ ನಾಯಕರುಗಳು, ಅಭಿಮಾನಿಗಳು ಭಾವುಕರಾದರು.

ನಂಜನಗೂಡು ನಗರದ ಕಾಂಗ್ರೆಸ್ ಕಾರ್ಯಕರ್ತರುಗಳು, ಅಭಿಮಾನಿಗಳು, ಊಟಿ ರಸ್ತೆಯಲ್ಲಿರುವ ಶ್ರೀಪ್ರಸನ್ನ ಚಿಂತಾಮಣಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿರುವ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ನಾಯಕರುಗಳು ಮಾತನಾಡಿದರು.

ಇದೇ ವೇಳೆ ದಿವಂಗತ ಆರ್.ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರವನಾರಾಯಣ ಮಾತನಾಡಿ, ನಮ್ಮ ತಂದೆ ನಿಧನರಾಗಿ ಎರಡೂವರೆ ವಾರ ಆದರೂ ಇನ್ನೂ ನಮ್ಮಲ್ಲೇ ಇದ್ದಾರೆ ಎಂದುಕೊಂಡಿದ್ದೇವೆ. ದೈಹಿಕವಾಗಿ ಹೋದರೂ ಮಾನಸಿಕವಾಗಿ ನಮ್ಮ ಜೊತೆ ಇದ್ದಾರೆ. ಈ ಕ್ಷೇತ್ರದಲ್ಲಿ ಜನರ ಸೇವೆ ಮಾಡಬೇಕು ಎಂದು ಬಯಸಿದ್ದರು. ನಮ್ಮ ಜೊತೆ ರಾಜಕಾರಣದ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದರು. 

ನಮ್ಮ ತಂದೆ ಕಾಲವಾದ ದಿನದಿಂದ ರಾಜ್ಯಾದ್ಯಂತ ಎಲ್ಲರೂ ನಮ್ಮ ಇಡೀ ಕುಟುಮಬಕ್ಕೆ ಸಾಂತ್ವಾನ ಹೇಳಿ ಶಕ್ತಿಯನ್ನು ತುಂಬಿದ್ದಾರೆ. ನಮ್ಮ ತಂದೆಗೆ ಆಶೀರ್ವಾದ ಮಾಡಿ ಕೈ ಹಿಡಿದರು ನನಗೂ ಆಶೀರ್ವಾದ ಮಾಡಿ ನನಗೂ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ನಮ್ಮ ತಂದೆ ಇಲ್ಲ ಆದರೆ ಎಲ್ಲರಲ್ಲೂ ನಮ್ಮ ತಂದೆಯವರನ್ನು ಕಾಣುತ್ತಿದ್ದೇನೆ. ಜನ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. 

Similar News