ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತ್ಯು

Update: 2023-03-29 15:22 GMT

ಚಿತ್ರದುರ್ಗ, 29: ಹೊಳಲ್ಕೆರೆ ತಾಲೂಕು, ನಂದನಹೊಸೂರು ಗ್ರಾಮದ ಗುಂಡಿಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಗಿರೀಶ(18), ಹೆಚ್.ಡಿ.ಪುರ ಗ್ರಾಮದ ಸಂಜಯ್(18) ಮತ್ತು ಕಣಿವೆ ಜೋಗಿಹಳ್ಳಿ ಗ್ರಾಮದ ಮನು (18) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. 

ನಿನ್ನೆ (ಮಂಗಳವಾರ) ಸಂಜೆ ವೇಳೆ ಕೆರೆಯಲ್ಲಿ ಯುವಕರು ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿತ್ರಳ್ಳಿ ಗೇಟ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Similar News