ಬಿಜೆಪಿ ಶಾಸಕನಿಂದ ಶ್ರೀರಾಮ ಪ್ರತಿಮೆಗೆ ಅವಮಾನ?

Update: 2023-03-31 08:29 GMT

ಬೀದರ್: ಬಸವಕಲ್ಯಾಣದಲ್ಲಿ ಬಿಜೆಪಿ ಶಾಸಕನಿಂದಲೇ ಶ್ರೀ ರಾಮನಿಗೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ರಾಮನ ಪ್ರತಿಮೆಯ ತೊಡೆ ಮೇಲೆ ನಿಂತ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರ ಫೊಟೋ ವೈರಲ್‌ ಆಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. 

ಶ್ರೀ ರಾಮ ಮೂರ್ತಿಯ ಕೊರಳಿಗೆ ಹೂವಿನ ಹಾರ ಹಾಕಲು ಮೂರ್ತಿಯ ತೊಡೆ ಮೇಲೆ ಬಿಜೆಪಿ ಶಾಸಕರು ಏರಿದ್ದಾರೆ ಎನ್ನಲಾಗಿದೆ. ರಾಮನವಮಿಯಂದು ಬಸವಕಲ್ಯಾಣದಲ್ಲಿ‌ ನಡೆದ ರಾಮನವಮಿ‌ ಶೋಭಾ ಯಾತ್ರೆ ವೇಳೆ ಈ ಘಟನೆ ನಡೆದಿದೆ.

ಘಟನೆ ಬಗ್ಗೆ ಮಾಜಿ ಶಾಸಕ‌ ಮಲ್ಲಿಕಾರ್ಜುನ ಖುಬಾ ಅವರು ಆಕ್ರೋಶ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ‌ ಪೊಸ್ಟ್ ಮಾಡಿದ್ದಾರೆ. ಸದ್ಯ, ಸಾಮಾಜಿಕ ಮಾಧ್ಯಮಗಳಲ್ಲಿ ಸಲಗರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Full View

Similar News