ಬೆಳಗಾವಿ: ಶಾಸಕನ ಪುತ್ರನ ಕಾರನ್ನು ತಪಾಸಣೆ ಮಾಡದ ಅಧಿಕಾರಿಗೆ ತಹಶೀಲ್ದಾರ್‌ ತರಾಟೆ

Update: 2023-04-02 09:31 GMT

ಬೆಳಗಾವಿ: ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಶಾಸಕನ ಪುತ್ರನ ಕಾರನ್ನು ತಪಾಸಣೆ ಮಾಡದೆ ಬಿಟ್ಟ ಅಧಿಕಾರಿಗೆ ತಹಶೀಲ್ದಾರ್‌ ತರಾಟೆಗೆ ತೆಗೆದುಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ವರದಿಯಾಗಿದೆ.

ಕಾಗವಾಡ ಹಾಲಿ ಶಾಸಕ ಹಾಗೂ ಮಾಜಿ ಜವಳಿ ಖಾತೆ ಸಚಿವ ಶಾಸಕ ಶ್ರೀಮಂತ ಪಾಟೀಲ ಅವರ ಪುತ್ರನ ಕಾರನ್ನು ತಪಾಸಣೆ ಮಾಡದೆ ಬಿಟ್ಟಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.  

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದಲ್ಲಿರುವ ಚುಣಾವಣಾ ಚೆಕ್‌ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿದ್ದ ಅಧಿಕಾರಿಗಳು ಶಾಸಕರ ಪುತ್ರ ಶ್ರೀನಿವಾಸ ಪಾಟೀಲರ ವಾಹನವನ್ನು ಪರಿಶೀಲಿಸದೆ ಬಿಟ್ಟಿರುವ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್‌ ಮಾಡಿ ಹರಿ ಬಿಟ್ಟಿದ್ದರು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ 'ಜನ ಸಾಮಾನ್ಯರಿಗೂಂದು ನ್ಯಾಯ ಜನಪ್ರತಿನಿಧಿಗಳ ಮಕ್ಕಳಿಗೆ ಒಂದು ನ್ಯಾಯನಾ' ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.

ಶಾಸಕರ ಪುತ್ರನ ವಾಹನ ಚೆಕ್ ಮಾಡದ ವಿಷಯ‌ ತಿಳಿದ ಕಾಗವಾಡ ತಹಸೀಲ್ದಾರ್ ಸ್ಥಳಕ್ಕೆ ದೌಡಾಯಿಸಿದ್ದು, ವಾಹನ ಪರಿಶೀಲಿಸದೆ ಕಳುಹಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಮ್ಮೆ ಈ ರೀತಿ ಆಗಿದ್ದೆ ಆದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

Full View

Similar News