ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಪರೋಕ್ಷವಾಗಿ ಮನವಿ ಮಾಡಿದ ಶಿವಲಿಂಗೇಗೌಡ
Update: 2023-04-10 06:29 GMT
ಹಾಸನ: ಅರಸೀಕೆರೆಯ ಮಾಜಿ ಶಾಸಕರದ ಕೆ.ಎಂ. ಶಿವಲಿಂಗೇಗೌಡ ಅವರು ರವಿವಾರ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು.
ಬಳಿಕ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೆ ಎಂ ಶಿವಲಿಂಗೇಗೌಡ, 'ನಾನು ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ. ಸುರೇಶ್ ಇವರುಗಳನ್ನು ನಂಬಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ನೀವು ನೀರಲ್ಲಾದರೂ ಹಾಕಿ ಹಾಲಲ್ಲಾದರೂ ಹಾಕಿ' ಎಂದರು.
'ಕಾಂಗ್ರೆಸ್ ಸೇರಿರುವುದಕ್ಕೆ ರಾಥೋಡ್ ಒಬ್ಬರು ವೇದಿಕೆಯಲ್ಲಿ ಇದ್ದಾರೆ ಅವರೇ ಸಾಕ್ಷಿ. ನಾನು ಅರಸೀಕೆರೆಯ ಯಾವ ಹಳ್ಳಿಗಾದ್ರು ಹೋದರೆ, ನೀವು ಸಚಿವರಾಗ್ತೀರಾ ಅಂತ ಕೇಳ್ತಾರೆ. ನೀವು ಅದೇನ್ ಮಾಡ್ತಿರೋ ಮಾಡಿ' ಎಂದು ಪರೋಕ್ಷವಾಗಿ ಮನವಿ ಮಾಡಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, 'ಶಿವಲಿಂಗೇಗೌಡ ಜನಪರ ಕಾಳಜಿಯ ಶಾಸಕ, ಇವರನ್ನು ಹಾಲಿಗೆ ಹಾಕುತ್ತೇವೆ ನಂಬಿಕೆ ಇರಲಿ. ಪಕ್ಷದಲ್ಲಿ ಯಾವುದೇ ಅವರಿಗೆ ತಾರತಮ್ಯ ಮಾಡುವುದಿಲ್ಲ' ಎಂದು ಭರವಸೆ ನೀಡಿದರು.