ಬಿಜೆಪಿಯ ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್: ಯಾರ್ಯಾರು?
Update: 2023-04-11 23:20 IST
ಹೊಸದಿಲ್ಲಿ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಇತ್ತೀಚೆಗೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿ 7 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಯಾರ್ಯಾರು?
ಅನಿಲ್ ಎಸ್.ಬೆನಕೆ(ಬೆಳಗಾವಿ ಉತ್ತರ)
ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ್(ರಾಮದುರ್ಗ)
ರಾಮಪ್ಪ ಲಮಾಣಿ(ಶಿರಹಟ್ಟಿ)
ಆನಂದ ಸಿಂಗ್ (ಹೊಸಪೇಟೆ-ವಿಜಯನಗರ) ಪುತ್ರ ಸಿದ್ದಾರ್ಥ್ ಗೆ ಟಿಕೆಟ್ ಘೋಷಿಸಲಾಗಿದೆ.
ಗೂಳಿಹಟ್ಟಿ ಶೇಖರ್(ಹೊಸದುರ್ಗ)
ರಘುಪತಿ ಭಟ್(ಉಡುಪಿ)
ಲಾಲಾಜಿ ಮೆಂಡನ್(ಕಾಪು)
ಸಂಜೀವ ಮಠಂದೂರು(ಪುತ್ತೂರು)
ಎಸ್.ಅಂಗಾರ(ಸುಳ್ಯ) ಅವರಿಗೆ ಟಿಕೆಟ್ ಕೈ ತಪ್ಪಿದೆ.