×
Ad

ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಅಥಣಿಯಿಂದ ಲಕ್ಷ್ಮಣ ಸವದಿಗೆ ಟಿಕೆಟ್

ಪುತ್ತೂರಿನಿಂದ ಅಶೋಕ್ ರೈ ಕಣಕ್ಕೆ ► ಮಂಗಳೂರು ಉತ್ತರ ಇನ್ನೂ ಸಸ್ಪೆನ್ಸ್

Update: 2023-04-15 14:17 IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ. 

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಅಶೋಕ್ ರೈ ಕಣಕ್ಕಿಳಿಯಲಿದ್ದಾರೆ. 

ಇನ್ನು ಮಂಗಳೂರು ದಕ್ಷಿಣಕ್ಕೆ ಜೆ.ಆರ್. ಲೋಬೋ ಹೆಸರು ಘೋಷಿಸಿದರೆ, ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಹೆಸರು ಘೋಷಿಸಿಲ್ಲ.

ಈವರೆಗೆ ಒಟ್ಟು 209 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್ ಇನ್ನೂ15 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ. 

ಅಭ್ಯರ್ಥಿಗಳ ಪಟ್ಟಿ:

ಮಂಗಳೂರು ದಕ್ಷಿಣ- ಜೆ.ಆರ್. ಲೋಬೋ

ಪುತ್ತೂರು- ಅಶೋಕ್ ಕುಮಾರ್ ರೈ

ಕೋಲಾರ – ಕೊತ್ತೂರು ಮಂಜುನಾಥ್

ದಾಸರಹಳ್ಳಿ- ಧನಂಜಯ

ಚಿಕ್ಕಪೇಟೆ – ಆರ್ ವಿ ದೇವರಾಜ್

ಅಥಣಿ- ಲಕ್ಷ್ಮಣ ಸವದಿ

ಕೃಷ್ಣರಾಜ – ಎಂ.ಕೆ‌ ಸೋಮಶೇಕರ್

ಶಿಕಾರಿಪುರ- ಗೋಣಿ ಮಾಲ್ತೇಶ್

ತೇರದಾಳ – ಸಿದ್ದು ಕೊಣ್ಣೂರರಚ

 ತರಿಕೆರೆ- ಶ್ರೀನಿವಾಸ್

ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್

ಅರಸಿಕೆರೆ- ಶಿವಲಿಂಗೇಗೌಡ

ಬೊಮ್ಮನಹಳ್ಳಿ – ಉಮಾಪತಿ ಗೌಡ

ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ

ಮೂಡಿಗೆರೆ- ನಯನ ಮೋಟಮ್ಮ

ಮದ್ದೂರು- ಉದಯ್ ಗೌಡ

ಶಿವಮೊಗ್ಗ – ಯೋಗೇಶ್

ನವಲಗುಂದ- ಕೋನರೆಡ್ಡಿ

ಕುಂದಗೋಳ- ಕುಸುಮಾ ಶಿವಳ್ಳಿ

ಕಲಬುರಗಿ ಗ್ರಾಮೀಣ- ರೇವುನಾಯ್ಕ್ ಬೆಳಮಗಿ

ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ

ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​

ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​

ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ

ದೇವರಹಿಪ್ಪರಗಿ-ಶರಣಪ್ಪ ಟಿ.ಸುನಗಾರ

ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ

ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್​ ರಾವ್​

ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ

ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ

ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ

ಬಳ್ಳಾರಿ ನಗರ ಕ್ಷೇತ್ರ-ಭರತ್​ ರೆಡ್ಡಿ

ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್​

ಸಿಂಧನೂರು: ಹಂಪನಗೌಡ ಬಾದರ್ಲಿ

ಕಾರ್ಕಳ- ಉದಯ್ ಶೆಟ್ಟಿ

ಚನ್ನಪಟ್ಟಣ- ಗಂಗಾಧರ್ ಎಸ್

ಚಾಮರಾಜ (ಮೈಸೂರು) – ಹರೀಶ್ ಗೌಡ

ಜಗಳೂರು ಕ್ಷೇತ್ರ-ಬಿ.ದೇವೇಂದ್ರಪ್ಪ

ಹರಪನಹಳ್ಳಿ ಕ್ಷೇತ್ರ-ಎನ್.ಕೊಟ್ರೇಶ್​

ಹೊನ್ನಾಳಿ ಕ್ಷೇತ್ರ-ಡಿ.ಜಿ.ಶಾಂತನಗೌಡ

Similar News