ಮಡಿಕೇರಿ: ಗುಂಡೇಟಿಗೆ ವ್ಯಕ್ತಿ ಬಲಿ; ಮೂವರು ಪೊಲೀಸ್ ವಶಕ್ಕೆ

Update: 2023-04-16 16:56 GMT

ಮಡಿಕೇರಿ: ಗುಂಡೇಟಿನಿಂದ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ವಿರಾಜಪೇಟೆ ಸಮೀಪದ ತೋರ ಗ್ರಾಮದಲ್ಲಿ ನಡೆದಿದೆ.  

ಸ್ಥಳೀಯ ನಿವಾಸಿ ಬೈಮನ ನಾಣಿ ಎಂಬುವವರ ಪುತ್ರ ಬಿ.ಎಂ.ಮಧು (44) ಮೃತ ವ್ಯಕ್ತಿ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. 

ವಿರಾಜಪೇಟೆ  ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News