ಸುಡಾನ್‍ನಿಂದ ಮರಳಿದ ರಾಜ್ಯದ ನಿವಾಸಿಗಳಿಗೆ KSRTC ಬಸ್‍ಗಳಲ್ಲಿ ಉಚಿತ ಪ್ರಯಾಣ

Update: 2023-04-25 17:10 GMT

ಬೆಂಗಳೂರು, ಎ.25: ಸುಡಾನ್ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ಸು ಕರೆತರಲು ಭಾರತ ಸರಕಾರದ ರಾಯಭಾರಿ ಕಚೇರಿಯು ಶ್ರಮಿಸುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಅವರ ಸ್ವಂತ ನಿವಾಸಗಳಿಗೆ ಉಚಿತ ಹೋಗಲು ನಿಗಮದ ಬಸ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

ಸುಡಾನ್ ದೇಶದಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ವಾಸಿಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಲ್ಲಿ, ಅಲ್ಲಿಂದ ಅವರ ಸ್ವಂತ ವಾಸಸ್ಥಳಗಳಿಗೆ ಉಚಿತವಾಗಿ ನಿಗಮದ ಬಸ್‍ಗಳಲ್ಲಿ ತಲುಪಬಹುದು. ಈ ಕುರಿತು ನಿಗದ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಎಸ್. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.

Similar News