ಮಡಿಕೇರಿ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Update: 2023-05-01 15:56 GMT

ಮಡಿಕೇರಿ ಮೇ 1 : ಕಾಡಾನೆ ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ನೋಕ್ಯ ಗ್ರಾಮದ ಎಡಪಾರೆ ಎಂಬಲ್ಲಿ ವರದಿಯಾಗಿದೆ.

ಮಲ್ಲಂಗಡ ಸನ್ನಿ ಚಂಗಪ್ಪ(64) ಎಂಬುವವರೇ ಮೃತ ದುರ್ದೈವಿ. ಸೋಮವಾರ ಬೆಳಗ್ಗೆ 8.30 ಸುಮಾರಿಗೆ ಹಸುವನ್ನು ಮೇಯಿಸಲು ಹೋದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.  

ಮನೆ ಸಮೀಪದ ಗದ್ದೆಗೆ ಹಸುವನ್ನು ಮೇಯಿಸಲು ಹೋದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು, ಸನ್ನಿ ಚಂಗಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Similar News