×
Ad

24 ಮಂದಿ ಬಂಡಾಯ ಅಭ್ಯರ್ಥಿಗಳನ್ನು ಉಚ್ಚಾಟನೆ ಮಾಡಿದ ಕಾಂಗ್ರೆಸ್

Update: 2023-05-02 12:55 IST

ಬೆಂಗಳೂರು, ಮೇ 2: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದ ಮಾಜಿ ಶಾಸಕರಾದ ಶಿರಹಟ್ಟಿ ಕ್ಷೇತ್ರದ ರಾಮಕೃಷ್ಣ ದೊಡ್ಡಮನಿ, ಕುಣಿಗಲ್ ಕ್ಷೇತ್ರದ ಬಿ.ಬಿ.ರಾಮಸ್ವಾಮಿಗೌಡ, ಜಗಲೂರು ಕ್ಷೇತ್ರದ ಎಚ್.ಪಿ.ರಾಜೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸೇರಿ 24 ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಉಚ್ಚಾಟನೆ ಮಾಡಿದೆ.

ಈ 24 ಮಂದಿ ಅಭ್ಯರ್ಥಿಗಳ ಜೊತೆ ಪಕ್ಷದ ನಾಯಕರು, ಕಾರ್ಯಕರ್ತರಾಗಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರೆ ಅಂತಹವರ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಕೆ.ರೆಹ್ಮಾನ್ ಖಾನ್ ಆದೇಶದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಅರಕಲಗೂಡು ಕ್ಷೇತ್ರದ ಕೃಷ್ಣೇಗೌಡ, ಕೆಪಿಸಿಸಿ ಸಂಯೋಜಕ ಚಂದ್ರಾ ಸಿಂಗ್, ಚಿಕ್ಕಮಗಳೂರು ಡಿಸಿಸಿ ಉಪಾಧ್ಯಕ್ಷ ಗೋಪಿಕೃಷ್ಣ, ಬೆಳಗಾವಿ ಯುವ ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟೆ, ಕಿಸಾನ್ ಸೆಲ್ ಉಪಾಧ್ಯಕ್ಷ ಪದ್ಮಜಿತ್ ನಾಡಗೌಡ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಸವರಾಜ್ ಮಲ್ಕಾರಿ, ನೆಲಮಂಗಲ ಕ್ಷೇತ್ರದ ಉಮಾದೇವಿ, ಬೀದರ್ ದಕ್ಷಿಣ ಕ್ಷೇತ್ರದ ಯೂಸುಫ್ ಅಲಿ ಜಾಮದಾರ್.

ಬೀದರ್ ದಕ್ಷಿಣ ಕ್ಷೇತ್ರದ ನಾರಾಯಣ ಬಂಗಿ, ಬೀದರ್ ದಕ್ಷಿಣ ಕ್ಷೇತ್ರದ ವಿಜಯಕುಮಾರ್ ಬರೂರು, ಮಾಯಕೊಂಡ ಕ್ಷೇತ್ರದ ಸವಿತಾ ಮಲ್ಲೇಶ್ ನಾಯಕ್, ಶ್ರೀರಂಗಪಟ್ಟಣ ಕ್ಷೇತ್ರದ ಪಿ.ಎಚ್. ಚಂದ್ರಶೇಖರ್, ಶಿಡ್ಲಘಟ್ಟ ಕ್ಷೇತ್ರದ ಪುಟ್ಟ ಆಂಜನಪ್ಪ, ರಾಯಬಾಗ್ ಕ್ಷೇತ್ರದ ಶಂಭು ಕೋಲ್ಕರ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿ.ಎಚ್. ಭೀಮಪ್ಪ, ಶಿಕಾರಿಪುರ ಕ್ಷೇತ್ರದ ಎಸ್.ಪಿ. ನಾಗರಾಜಗೌಡ, ತರೀಕೆರೆ ಕ್ಷೇತ್ರದ ದೋರ್ನಲ್ ಪರಮೇಶ್ವರಪ್ಪ, ಬೀದರ್ ಕ್ಷೇತ್ರದ ಶಶಿ ಚೌಧಿ, ಔರಾದ್ ಕ್ಷೇತ್ರದ ಲಕ್ಷ್ಮಣ ಸೊರಳಿ, ರಾಯಚೂರು ನಗರ ಕ್ಷೇತ್ರದ ಮುಜೀಬುದ್ದೀನ್ ಇವರುಗಳು ಕಾಂಗ್ರೆಸ್‍ನಿಂದ ಉಚ್ಚಾಟನೆಗೊಂಡ ಅಭ್ಯರ್ಥಿಗಳಾಗಿದ್ದಾರೆ.

Similar News