ಮಗನ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನ ಈಶ್ವರಪ್ಪನವರೇ ಸೋಲಿಸುತ್ತಾರೆ: ಆಯನೂರು ಮಂಜುನಾಥ್ ಆರೋಪ

Update: 2023-05-02 10:16 GMT

ಶಿವಮೊಗ್ಗ: ಮಗನ ಭವಿಷ್ಯಕ್ಕಾಗಿ ಈಶ್ವರಪ್ಪನವರೇ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪನವರನ್ನು ಸೋಲಿಸುತ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಆರೋಪ‌ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೆದ್ದರೇ ಈಶ್ವರಪ್ಪನವರ ಮಗನ ಭವಿಷ್ಯಕ್ಕೆ ಕುತ್ತು ಉಂಟಾಗುತ್ತೇ. ಹಾಗಾಗಿ ಅವರೇ ತಮ್ಮ ಮಗನ ಭವಿಷ್ಯಕ್ಕಾಗಿ ಈ ಚುನಾವಣೆಯಲ್ಲಿ ಸೋಲಿಸುತ್ತಾರೆ, ಯಾವುದೇ ಅನುಮಾನ ಬೇಡ ಎಂದರು.

ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಈಶ್ವರಪ್ಪನವರಂತೆಯೇ ಅವರ ಕಾರ್ಬನ್ ಕಾಫಿ ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಯೋಗಿಶ್ ಈಶ್ವರಪ್ಪ ನವರ ಅಪ್ಪಟ ಶಿಷ್ಯ ಹಾಗಾಗಿಯೇ ಅವರಿಗೆ ಟಿಕೆಟ್ ಸಿಕ್ಕಿರಬಹುದು ಎಂದರು.

ಇನ್ನೂ ಇಡೀ ಮಹಾನಗರ ಪಾಲಿಕೆ ಗೆಲ್ಲುವ ಸಾಮರ್ಥ್ಯ ಇರುವ ಬಿಜೆಪಿಗೆ ಈಶ್ವರಪ್ಪ ನವರ ಮನೆ ಇರುವ ವಾರ್ಡ್ ನಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಯೋಗಿಶ್ ಅವರು  ಪಾಲಿಕೆ ಸದಸ್ಯರಾಗುತ್ತಾರೆ ಅಂದರೆ ನೀವೇ ಯೋಚಿಸಿ ಎಂದರು.

'ನಮಗೆ ಪ್ರತಿಸ್ಪರ್ಧಿ ಇಲ್ಲ ,ಸಮೀಪ ಸ್ಪರ್ಧಿ ಇದ್ದಾರೆ': 

ಇನ್ನೂ ನಮಗೆ ಯಾರು ಪ್ರತಿ ಸ್ಪರ್ಧಿ ಇಲ್ಲ ಸಮೀಪದಲ್ಲಿ ಇದ್ದಾರೆ.ಪ್ರತಿಸ್ಪರ್ಧಿ ಎಂದರೇ ನಮ್ಮ ಮುಂದೆ ಇರ್ತಾರೆ ಸಮೀಪ ಅಂದರೇ ನಮ್ಮ ಹಿಂದೆ ಇರ್ತಾರೆ ಹಾಗಾಗಿ ನಮಗೆ ಪ್ರತಿಸ್ಪರ್ಧಿ ಇಲ್ಲ ಎಂದರು.

'ಈ ಬಾರಿ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆಲ್ಲುತ್ತೇವೆ': 

ಇನ್ನೂ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತದೆ. ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ ನಾವು ಗೆಲ್ಲುತ್ತೇವೆ ಎಂದರು.

ಜನರಿಗೆ ರಕ್ಷಣೆ ಕೊಡಬೇಕಾದ ಕೇಂದ್ರ ಗೃಹ ಸಚಿವರಿಗೆ ಶಿವಮೊಗ್ಗದಲ್ಲಿ ಪೊಲೀಸ್ ರಕ್ಷಣೆ ಕೊಡುತ್ತಾರೆ ಎಂದರೆ ಇನ್ನು ಜನರ ರಕ್ಷಣೆ ಪರಿಸ್ಥಿತಿ ಏನೂ ಎಂಬುದು ಜನರು ಅರ್ಥ ಮಾಡಿಕೊಳ್ಳಬೇಕು. ಅಮಿತ್ ಶಾ ಬರುವ ಮುನ್ನವೇ ಶಿವಮೊಗ್ಗದಲ್ಲಿ ಒಂದು ರೀತಿ ನಿಷೇಧಾಜ್ಞೆ ಜಾರಿ ಮಾಡಿದ ವಾತಾವರಣ ನಿರ್ಮಾಣವಾಗಿತ್ತು. ಇದು ನಗರದಲ್ಲಿ ಹಿಂದೆ ಆದ ನಿಷೇಧಾಜ್ಞೆಯನ್ನು ನೆನಪಿಸಿದೆ. ಮುಂದೆ ಇವರು ಅಧಿಕಾರಕ್ಕೆ ಬಂದರೆ ನಗರದ ಪರಿಸ್ಥಿತಿ ಏನಾಗಬಹುದು, ವಾಪಾರಸ್ಥರು, ಸಾರ್ವಜನಿಕರು ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.

'ನಾಳೆ ಹೆಚ್ ಡಿ ಕೆ ಶಿವಮೊಗ್ಗಕ್ಕೆ':

 ಮೇ 3 ರ ಸಂಜೆ 4-30 ಕ್ಕೆ ಸೊರಬದಲ್ಲಿ ಸಮಾವೇಶ ಮುಗಿಸಿಕೊಂಡು ಸಂಜೆ 6 ಗಂಟೆಗೆ ನಗರದ ಎನ್ಇಎಸ್ ಮೈದಾನದಲ್ಲಿ ನಡೆಯುವ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆಬಿ  ಪ್ರಸನ್ನ ಕುಮಾರ್,ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Similar News