ಬಜರಂಗಬಲಿಯನ್ನು ಬಂಧಿಯಾಗಿಸಲು ಕಾಂಗ್ರೆಸ್‌ ನಿರ್ಧರಿಸಿದೆ: ಪ್ರಧಾನಿ ಮೋದಿ

Update: 2023-05-02 12:00 GMT

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸಲಾಗುವುದು ಎಂಬ ಕಾಂಗ್ರೆಸ್‌ ಪ್ರಣಾಳಿಕೆಯ ಆಶ್ವಾಸನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹೊಸಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಿಡಿಕಾರಿದ್ದಾರೆ.

ದೇಶದ ಈ ಹಳೆಯ ಪಕ್ಷಕ್ಕೆ ಹಿಂದೆ ಶ್ರೀ ರಾಮ ದೇವರೊಂದಿಗೆ ಸಮಸ್ಯೆಯಿದ್ದರೆ ಈಗ ಅವರು ಜೈ ಬಜರಂಗಬಲಿ ಎಂದು ಘೋಷಣೆ ಮೊಳಗಿಸುವವರನ್ನು ಬಂಧಿಯಾಗಿಸಲು ಪಣತೊಟ್ಟಿದ್ದಾರೆ ಎಂದರು.

“ನಾನು ಹನುಮಾನ್‌ ದೇವರ ನಾಡಿಗೆ ನನ್ನ ಗೌರವ ಸಲ್ಲಿಸಲು ಬಂದಿರುವಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯನ್ನು ಬಜರಂಗಬಲಿಯನು ಬಂಧಿಯಾಗಿಸಲು ನಿರ್ಧರಿಸಿದೆ,” ಎಂದು ಪ್ರಧಾನಿ ಹೇಳಿದರು.

“ಕರ್ನಾಟಕದ ಗೌರವ ಮತ್ತು ಸಂಸ್ಕೃತಿಗೆ ಧಕ್ಕೆ ತರಲು ನಾವು ಯಾರಿಗೂ ಆಸ್ಪದ ನೀಡುವುದಿಲ್ಲ,” ಎಂದು ಮೋದಿ ಹೇಳಿದರು.

Similar News