×
Ad

2012ರಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ಬೊಮ್ಮಾಯಿ: ಜಗದೀಶ್ ಶೆಟ್ಟರ್

Update: 2023-05-06 10:05 IST

ಧಾರವಾಡ: ಕಾಂಗ್ರೆಸ್ ಕೆಸರು ಎಂದು ಹೇಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಷಗಳ ಹಿಂದೆ ತಾವು ಕಾಂಗ್ರೆಸ್ ಸೇರಲು ಪಕ್ಷದ ಕದ ತಟ್ಟಿದ್ದನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಶುಕ್ರವಾರ ರೋಡ್ ಶೋ ನಡೆಸಿ ಮಾತನಾಡಿದ ಅವರು, ‘2012ರಲ್ಲಿ ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಪಕ್ಷ ಸ್ಥಾಪಿಸಲು ಹೇಳಿ, ಕಾಂಗ್ರೆಸ್ ಸೇರಲು ಕದ ತಟ್ಟಿದ್ದ ಬೊಮ್ಮಾಯಿ ಅವರಿಗೆ ಬೇಕಾದ ಕ್ಷೇತ್ರವನ್ನು ಕಾಂಗ್ರೆಸ್ ನೀಡದ ಕಾರಣ, ಬಿಜೆಪಿಯಲ್ಲೇ  ಉಳಿದಿದ್ದಾರೆ. ನನಗೆ ನೈತಿಕತೆಯ ಪಾಠ ಹೇಳುವ ಅಧಿಕಾರ ಬೊಮ್ಮಾಯಿಗೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಂಶಾಡಳಿತ, 65 ವರ್ಷದ ಮಿತಿ ಹಾಗೂ ಚಾರಿತ್ರ್ಯವಂತರ ಸ್ಪರ್ಧೆ ಕುರಿತು ಮಾತನಾಡುತ್ತಿರುವ ಬಿಜೆಪಿ 80 ಕ್ರಿಮಿನಲ್ ಪ್ರಕರಣವಿರುವ ರೌಡಿ ಶೀಟರ್ಗೆ ಕಲಬುರ್ಗಿಯಲ್ಲಿ ಟಿಕೆಟ್ ನೀಡಿದೆ. ಹಲವೆಡೆ ವಂಶಾಡಳಿತಕ್ಕೆ ಮಣೆ ಹಾಕಿರುವ ಬಿಜೆಪಿ70 ಮೀರಿದವರಿಗೂ ಟಿಕೆಟ್ ನೀಡಿದೆ. ಬಿಜೆಪಿಯಲ್ಲಿ ಈಗ ಯಾವ ಸಿದ್ಧಾಂತವೂ ಉಳಿದಿಲ್ಲ ಎಂದು ಟೀಕಿಸಿದರು.

Similar News