ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಷ್ಟೂ ಕಾಂಗ್ರೆಸ್ ಗೆ ಲಾಭ: ದಿನೇಶ್ ಗುಂಡೂರಾವ್

Update: 2023-05-06 07:56 GMT

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಷ್ಟೂ ಕಾಂಗ್ರೆಸ್ ಗೆ ಒಳ್ಳೆಯದೇ. ಆದ್ದರಿಂದ ಪ್ರಧಾನಿ ಇಲ್ಲಿಯೇ ಮನೆ ಮಾಡುವುದು ಉತ್ತಮ ಎಂದು ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಪ್ರಧಾನಿ ರಾಜ್ಯಕ್ಕೆ ಬಂದಷ್ಟೂ ಬಿಜೆಪಿ ಡ್ಯಾಮೇಜ್ ಆಗುತ್ತಿದೆ. ಅವರು ಹೀಗೆ ಬೀದಿ ಬೀದಿ ಸುತ್ತುತ್ತಿರುವ ಕಾರಣ ಜನರಲ್ಲಿ ನಕಾರಾತ್ಮಕ ಭಾವನೆ ಮೂಡುತ್ತಿದೆ ಎಂದು ಹೇಳಿದರು.

ಗಡಿ, ಕೆಲವು ರಾಜ್ಯಗಳಲ್ಲಿನ ಸಂಘರ್ಷ ಸೇರಿದಂತೆ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವೆಲ್ಲವುಗಳನ್ನು ಬಿಟ್ಟು ಹೀಗೆ ಬೀದಿ ಬೀದಿ ಅಲೆಯುವ ಮೂಲಕ ಸ್ವತಃ ಮೋದಿ ಅವರೇ ಪ್ರಧಾನಿ ಹುದ್ದೆಗೆ ಅವಮಾನ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

Similar News