ತುಮಕೂರು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕಣದಿಂದ ನಿವೃತ್ತಿ; ಬಿಜೆಪಿಗೆ ಸೇರ್ಪಡೆ

Update: 2023-05-08 09:11 GMT

ತುಮಕೂರು,ಮೇ 8:ತುಮಕೂರು ನಗರದ ಪಕ್ಷೇತರ ಅಭ್ಯರ್ಥಿಯಾದ ನರಸೇಗೌಡ ಚುನಾವಣಾ ಕಣದಿಂದ ನಿವೃತ್ತಿಹೊಂದಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಇದೇ ಸಂಧರ್ಭದಲ್ಲಿ ನರಸೇಗೌಡರು ಮಾತನಾಡುತ್ತಾ ಪಕ್ಷ ಸಿದ್ಧಾಂತ, ಪ್ರಧಾನಮಂತ್ರಿಯಾದ ನರೇಂದ್ರಮೋದಿರವರ ಆಡಳಿತ ಮೆಚ್ಚಿ ಹಾಗೂ ತುಮಕೂರು ನಗರದ ಬಿಜೆಪಿ ಅಭ್ಯರ್ಥಿಯಾದ ಜಿ.ಬಿ.ಜ್ಯೋತಿಗಣೇಶ್‍ರವರ ಸರಳತೆ-ಸಜ್ಜನಿಕೆ, ಆಡಳಿತ ವೈಕರಿಗೆ ಮೆಚ್ಚಿ ನಾನು ಇಂದು ಪಕ್ಷೇತರ ಅಭ್ಯರ್ಥಿಯಿಂದ ನಿವೃತ್ತಿಹೊಂದಿ ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲಿಗರೊಂದಿಗೆ ಇಂದು ಸೇರ್ಪಡೆಗೊಂಡಿರುತ್ತೇನೆ. ಹಾಗೂ ಬಿಜೆಪಿ ಗೆಲುವಿಗೆ ನಾವೇಲ್ಲರೂ ಶ್ರಮಿಸೋಣ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಜಿ.ಎಸ್.ಬಸವರಾಜ್ ,ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ರವಿಶಂಕರ್ ಹೆಬ್ಬಾಕ,ವಿಧಾನ ಪರಿಷತ್ ಸದಸ್ಯರಾದ ಚಿದಾನಂದಗೌಡ,ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್,ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ,ಸಹ ಪ್ರಮುಖ್ ಜೆ.ಜಗದೀಶ್, ತುಮಕೂರು ನಗರ ಮಂಡಲ ಕಾರ್ಯದರ್ಶಿ ರಾಧ ಗಂಗಾಧರ್ ಹಾಗೂ ಪ್ರಮುಖರು ಭಾಗವಹಿಸಿದ್ದರು.

Similar News