×
Ad

20 ಶಾಸಕರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ತಾರೆ: ಲಖನ್ ಜಾರಕಿಹೊಳಿ

''80 ಸ್ಥಾನ ಬಂದ್ರೂ ಬಿಜೆಪಿ ಸರ್ಕಾರ ರಚಿಸುತ್ತೆ''

Update: 2023-05-12 15:56 IST

ಬೆಳಗಾವಿ, ಮೇ 12: ‘ಬಿಜೆಪಿಗೆ ಪೂರ್ಣ ಬಹುಮತ ಬರದಿದ್ದರೆ ಆಪರೇಷನ್ ಕಮಲ ಸಾಧ್ಯತೆ ಇದೆ. ಆದರೆ, ಹಾಗೇ ಆಗುವುದಿಲ್ಲ. ಬಿಜೆಪಿಗೆ 120 ಸ್ಥಾನ ಬರಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ 85 ಸ್ಥಾನ ಬದಲಿದ್ದು, ಆಪೈಕಿ ಇಪ್ಪತ್ತು ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಪಕ್ಷಕ್ಕೆ ಅಧಿಕಾರ ದೊರೆಯದಿದ್ದರೆ ಅವರು ಎನೂ ಮಾಡುತ್ತಾರೆ. ರಾಜೀನಾಮೆ ಕೊಟ್ಟು ಅಧಿಕಾರ ಇರುವವರ ಜತೆ ಬರುತ್ತಾರೆ’ ಎಂದು ಹೊಸ ಬಾಂಬ್ ಸಿಡಿಸಿದರು.

‘ಗೋವಾ ರಾಜ್ಯದಲ್ಲಿ ಆದ ಹಾಗೆಯೇ ಕರ್ನಾಟಕದಲ್ಲಿಯೂ ಆಗಲಿದೆ. ಯಾರ ನೇತೃತ್ವದಲ್ಲಿ ಇವೆಲ್ಲ ನಡೆಯಲಿದೆ ಗೊತ್ತಿಲ್ಲ. ಆದರೆ, ಮತ್ತೆ ಇಪ್ಪತ್ತು ಜನ ಶಾಸಕರು ಬಿಜೆಪಿಗೆ ಬರುತ್ತಾರೆ. ನಾನು ಪರಿಷತ್ ಸದಸ್ಯನಾಗಿದ್ದು ಪಕ್ಷೇತರನಾಗಿಯೇ ಇರುತ್ತೇನೆ ಎಂದು ಲಖನ್ ಜಾರಕಿಹೊಳಿ ಇದೇ ವೇಳೆ ಸ್ಪಷ್ಟನೆ ನೀಡಿದರು.

‘ಎಷ್ಟೇ ಮಂದಿ ಶಾಸಕರು ರಾಜೀನಾಮೆ ನೀಡಿ ಹೊದರೂ ಬಿಜೆಪಿಯವರಿಗೆ ಬಹುಮತ ಆಗುವುದಿಲ್ಲ. ಅವರು ಬಹುಮತ ಪಡೆಯಲು ಅಂತರ ಬಹಳ ಇರಲಿದೆ. ಅಷ್ಟೆಲ್ಲ ಶಾಸಕರನ್ನು ಸೇರಿಸಲು ಅವರಿಂದ ಸಾಧ್ಯವಾಗದು. ಬಿಜೆಪಿಯವರು ಸದ್ಯಕ್ಕೆ ಆಪರೇಷನ್ ಕಮಲ ಮಾಡುವುದಿಲ್ಲ. ಲೋಕಸಭಾ ಚುನಾವಣೆ ಆಗುವವರೆಗೆ ಶಾಂತವಾಗಿ ಇರುತ್ತಾರೆ. ಈ ಅವಧಿಯಲ್ಲಿ ನಾವು ಗಟ್ಟಿಯಾಗಬೇಕು. ಈ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಒಂದು ತಿರುವು ನೀಡಲಿದೆ’

-ಸತೀಶ್ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ


''ನಾನು ಮೊದಲಿಂದಲೂ ಒಂದೇ ಮಾತು ಹೇಳುತ್ತ ಬಂದಿದ್ದೇನೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ. ನಾವು ಗೆಲ್ಲುವ ವಿಶ್ವಾಸ ಇದ್ದು, ಬಹುಮತದ ಗಡಿ ದಾಟುತ್ತೇವೆ. ಮ್ಯಾಜಿಕ್ ನಂಬರ್ ತಲುಪುತ್ತೇವೆ. ಎಲ್ಲ ಕ್ಷೇತ್ರ, ಬೂತ್ ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ''

 - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Similar News