ಗೆಲುವಿಗೆ ಕಾರಣರಾದವರನ್ನು ಒಪ್ಪಿಕೊಳ್ಳುವ ಸೌಜನ್ಯ ಇರಬೇಕು: ಡಿ.ಕೆ. ಶಿವಕುಮಾರ್

Update: 2023-05-15 16:38 GMT

ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿರುವ ನಡುವೆಯೇ ದಿಲ್ಲಿ ಪ್ರವಾಸವನ್ನು ಡಿ.ಕೆ. ಶಿವಕುಮಾರ್ ಧಿಡೀರ್ ರದ್ದು ಮಾಡಿದ್ದಾರೆ. ಅನಾರೋಗ್ಯದ ಕಾರಣ ನೀಡಿ ದಿಲ್ಲಿ ಪ್ರವಾಸದಿಂದ ಹಿಂದೆ ಸರಿದಿರುವ ಡಿಕೆ ಶಿವಕುಮಾರ್, ಪಕ್ಷದ ಗೆಲುವಿಗೆ ಕಾರಣಕರ್ತರಾದವರನ್ನು ಸ್ಮರಿಸುವ ಸೌಜನ್ಯ ಇರಬೇಕು ಎಂದು ಹೇಳಿದ್ದಾರೆ. 

NDTVಗೆ ನೀಡಿದ ಸಂದರ್ಶನದಲ್ಲಿ, "'ನಿಮ್ಮ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಾವು ಗೆಲ್ಲುತ್ತೇವೆ' ಎಂದು ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದರು. ನಾನು ಇಲ್ಲಿ ನನ್ನ ಜವಾಬ್ದಾರಿ ಮಾಡಲು ಕುಳಿತಿದ್ದೇನೆ.  ನೀವು ಕನಿಷ್ಟ ಸೌಜನ್ಯವನ್ನು ಹೊಂದಿರಬೇಕು, ಸ್ವಲ್ಪ ಕೃತಜ್ಞತೆ. ಗೆಲುವಿನ ಹಿಂದೆ ಯಾರಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವ ಸೌಜನ್ಯವನ್ನು  ಹೊಂದಿರಬೇಕು” ಎಂದು ಅವರು  ಹೇಳಿದರು.

"ನಾನು ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ, ಅಂತಹ ಕೆಲಸ ನಾನು ಮಾಡಲ್ಲ, ನನಗೆ ನನ್ನ ಅರಿವಿದೆ, ನಾನು ಮಗು ಅಲ್ಲ. ಪಕ್ಷಕ್ಕೆ ನಿಷ್ಠನಾಗಿರುತ್ತೇನೆ. ಯಾವುದೆ ಷಡ್ಯಂತ್ರಕ್ಕೆ ಬಲಿಯಾಗುವುದಿಲ್ಲ" ಎಂದು ಹೇಳಿದ್ದಾರೆ.

Similar News