‘ಷರತ್ತುಗಳು ಅನ್ವಯ’ ಎಂಬ ಕಾಂಗ್ರೆಸ್ ನ ಕುಂಟುನೆಪ: ಬಿಜೆಪಿ ಟೀಕೆ

Update: 2023-05-21 06:56 GMT

ಬೆಂಗಳೂರು: ಗ್ಯಾರಂಟಿ ಜಾರಿಗೊಳಿಸಲು ಕಾಂಗ್ರೆಸ್ ಕುಂಟುನೆಪ ಹೇಳುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ,  ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಭರಪೂರ ಗ್ಯಾರಂಟಿಗಳ ನೀಡಿತ್ತು. ಆದರೆ ಈಗ ಪ್ರತಿಯೊಂದಕ್ಕೂ "ಷರತ್ತುಗಳು ಅನ್ವಯ" ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಜನಾಧಿಕಾರ ನೀಡಿದ್ದು ಷರತ್ತುಗಳ ಮೇಲೆ ಸರ್ಕಾರ ನಡೆಸುವುದಕ್ಕಲ್ಲ ಎಂಬುದನ್ನು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಅರಿತುಕೊಳ್ಳಬೇಕು ಎಂದು ಟ್ವೀಟ್ ಮಾಡಿದೆ.

Similar News