ಕಾಂಗ್ರೆಸ್‍ಗೆ ‘ಗ್ಯಾರಂಟಿ’ ಭರವಸೆ ಈಡೇರಿಸುವ ಆಸಕ್ತಿ ಇಲ್ಲ: ಪ್ರಹ್ಲಾದ್ ಜೋಶಿ

Update: 2023-05-21 14:47 GMT

ಹುಬ್ಬಳ್ಳಿ: ‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಲು ಆಸಕ್ತಿ ಇಲ್ಲ. ಹೀಗಾಗಿ ಅವರು ನೀಡಿದ್ದು ಸುಳ್ಳು ಭರವಸೆ ಎಂದು ಇದೀಗ ಗೊತ್ತಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಐದು ಗ್ಯಾರಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲೇ ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಆದರೆ ಈಗ ತಾತ್ವಿಕ ಒಪ್ಪಿಗೆ ಎಂದರೆ ಏನು?. ಜನತೆ ಭರವಸೆ ನೀಡುವ ಮೊದಲೇ ಈಡೇರಿಸುವ ಶಕ್ತಿ ಇದೆಯೋ ಇಲ್ಲವೋ ಎಂದು ಆಲೋಚಿಸಬೇಕಿತ್ತು’ ಎಂದು ಟೀಕಿಸಿದರು.

 ‘ಬಿಜೆಪಿ ಸರಕಾರದಲ್ಲಿ ಯಾವುದೇ ಹಗರಣವೂ ನಡೆದಿಲ್ಲ. ಅಗತ್ಯವಿದ್ದರೆ ತನಿಖೆ ಮಾಡಿಸಲಿ. ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿ ಯಾವುದೇ ಇಲಾಖೆಯಲ್ಲಿ ಹಗರಣ ಆಗಿಲ್ಲ. ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಬರಬೇಕಾದ ಅನುದಾನ ಎಷ್ಟು ಎಂದು ಈಗಾಗಲೇ ತಿಳಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚಳವಾಗಿದೆ’ ಎಂದು ಜೋಶಿ ತಿಳಿಸಿದರು.

Similar News