ಕನ್ನಡಿಗರೆಲ್ಲರೂ 'ಡೇರ್​ಡೆವಿಲ್ ಮುಸ್ತಫಾ' ಚಿತ್ರ ನೋಡಿ, ಇದರಿಂದ ನಮಗೆ ಸೌಹಾರ್ದ ಪಾಠ ಇದೆ: ಪ್ರತಾಪ್​ ಸಿಂಹ

Update: 2023-05-27 13:51 GMT

ಮೈಸೂರು: 'ನಮ್ಮ ಮೈಸೂರು ಹುಡುಗರು ಮಾಡಿರುವ ‘ಡೇರ್​ಡೆವಿಲ್​ ಮುಸ್ತಫಾ; ಸಿನೆಮಾವನ್ನು ದಯವಿಟ್ಟು ಎಲ್ಲ ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ನೋಡಬೇಕು. ಇದು ಅದ್ಭುತವಾದ ಸಿನೆಮಾ, ಇದರಲ್ಲಿ ನಮಗೆ ಸೌಹಾರ್ದಯುತವಾಗಿ ನಾವು ಹೇಗೆ ಬದುಕಬೇಕೆಂಬ ಪಾಠ ಇದೆ' ಎಂದು ಕೊಡಗು- ಮೈಸೂರು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ. 

ಶನಿವಾರ ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಅವರ ಜೊತೆ ಚಿತ್ರಮಂದಿರಕ್ಕೆ ತೆರಳಿ 'ಡೇರ್​ಡೆವಿಲ್ ಮುಸ್ತಫಾ' ಸಿನೆಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,  'ಈ ಸಿನೆಮಾದಲ್ಲಿ ಯಾವುದೇ ಪೂರ್ವಾಗ್ರಹಗಳು ಇಲ್ಲ. ಧನಂಜಯ್​ ಅವರು ಈ ಚಿತ್ರವನ್ನು ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಕನ್ನಡ ಚಿತ್ರರಂಗದ ಎಲ್ಲ ನಟರು ಇದನ್ನು ಅನುಸರಿಸಬೇಕು. ನಮ್ಮ ಮೈಸೂರು ಹುಡುಗರಿಗೆ ಈ ರೀತಿಯ ಸಿನೆಮಾಗಳನ್ನು ಇನ್ನಷ್ಟು ಮಾಡಲು ತಾಯಿ ಚಾಮುಂಡೇಶ್ವರಿ ಶಕ್ತಿ ನೀಡಲಿ' ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು. 

'ನಿರ್ಮಾಪಕ ಡಾಲಿ ಧನಂಜಯ್​ ಅವರು ತಾನು ಬೆಳೆಯುವ ಹಂತದಲ್ಲೇ ಹೊಸ ಹುಡುಗರನ್ನು ಬೆಳೆಸುವಂತಹ ಕೆಲಸ ಮಾಡುತ್ತಿದ್ದಾರೆ. ಹೊಸಬರನ್ನು ಬೆಳೆಸುವಂತಹ ಹೃದಯವಂತಿಕೆ ಬೇರೆ ಎಲ್ಲರಿಗೂ ಬರಬೇಕು. ಅದಕ್ಕೆ ಧನಂಜಯ್​ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಒಳ್ಳೆಯ ಮನಸ್ಸಿನಿಂದ ಹೇಳುತ್ತೇನೆ' ಎಂದು ಹೇಳಿದ್ದಾರೆ. 

Similar News