ಎಲ್ಲರೂ ಸೇರಿ ನನ್ನನ್ನು ತುಳಿಯಲು ಯತ್ನಿಸಿದರು, ಗಂಗಾವತಿಯ ಜನತೆ ನನ್ನ ಕೈ ಹಿಡಿದರು: ಶಾಸಕ ಜನಾರ್ದನ ರೆಡ್ಡಿ
Update: 2023-05-28 16:48 GMT
ಗಂಗಾವತಿ: ಎಲ್ಲರೂ ಸೇರಿ ನನ್ನನ್ನ ತುಳಿಯಲು ಯತ್ನಿಸಿದರು ಆದರೆ, ಗಂಗಾವತಿಯ ಜನತೆ ನನ್ನ ಕೈ ಹಿಡಿದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಗಂಗಾವತಿಯಲ್ಲಿ ಮತದಾರರ ಅಭಿನಂದನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಈ ಬಾರಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಜನ ಮತ ನೀಡಿದ್ದಾರೆ. ನಾನು ಅದಕ್ಕಿಂತ ಹೆಚ್ಚಾಗಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವೆ. ನಾನು ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇನೆ. ಇಲ್ಲದಿದ್ದರೆ ಮುಂದಿನ ಬಾರಿ ನನಗೆ ಮತ ಹಾಕಬೇಡಿ' ಎಂದು ಹೇಳಿದರು.
'ಗಂಗಾವತಿಯನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ. ಗಂಗಾವತಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವೆ. ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇನೆ' ಎಂದು ಭರವಸೆ ನೀಡಿದರು.