ಚಾಮರಾಜನಗರ: 3 ಕೋಟಿ ರೂ.ಬೆಲೆಬಾಳುವ ಅಂಬರ್ ಗ್ರೀಸ್ ಪೊಲೀಸ್ ವಶ; ಇಬ್ಬರ ಬಂಧನ

Update: 2023-05-29 08:15 GMT

ಚಾಮರಾಜನಗರ: 3 ಕೋಟಿ ರೂ.ಬೆಲೆಬಾಳುವ 3.50 ಕೆ. ಜಿ.ಅಂಬರ್ ಗ್ರೀಸ್  ( ತಿಮಿಂಗಲ ದ ವಾಂತಿ )ಯನ್ನು ಜಿಲ್ಲೆಯ ಕೊಳ್ಳೇಗಾಲ ಸಮೀಪದ ಮುಡಿಗುಂಡದ ಬಸ್ ನಿಲ್ದಾಣದ ಬಳಿ ಪೊಲೀಸರು ವಶಪಡಿಸಿದ್ದಾರೆ.

ಅರಣ್ಯ ಇಲಾಖೆಯ ಸಂಚಾರಿ ಸಿ. ಐ. ಡಿ ಪೋಲಿಸರ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಮೂಲದ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಸಮೀ ಅಹ್ಮದ್ ಹಾಗೂ ಫೈರೋಜ್ ಖಾನ್  ಎಂದು ಗುರುತಿಸಲಾಗಿದೆ. ಆರೋಪಿಗಳು ಚಿಕ್ಕಮಗಳೂರಿನಿಂದ ತಮಿಳುನಾಡಿನ ಸೇಲಂಗೆ ಅಂಬರ್ ಗ್ರೀಸ್ ಸಾಗಿಸುತ್ತಿದ್ದರೆಂದು ತಿಳಿದು ಬಂದಿದೆ.

ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Similar News