ಚಿಕ್ಕಮಗಳೂರು: ಭಾರೀ ಗಾಳಿ ಮಳೆ; ಜನಜೀವನ ಅಸ್ತವ್ಯಸ್ತ
Update: 2023-05-31 06:09 GMT
ಚಿಕ್ಕಮಗಳೂರು : ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹತ್ತಕ್ಕೂ ಅಧಿಕ ಮನೆಗಳ ಮೇಲ್ಛಾವಣಿಗಳಿಗೆ ಹಾನಿಯಾದ ಘಟನೆ ಕಡೂರು ತಾಲೂಕಿನ ಪಿಳ್ಳೇನಹಳ್ಳಿ, ಹುಡಿಗರಹಳ್ಳಿಯಲ್ಲಿ ನಡೆದಿದೆ.
ಭಾರಿ ಗಾಳಿಗೆ ಮನೆಗಳ ಹಂಚು, ಸಿಮೆಂಟ್ ಸೀಟ್ ಗಳು ಹಾರಿ ಹೋಗಿದ್ದು, ಧಾರಾಕಾರ ಮಳೆಗೆ ಜನ ಹೈರಾಣಾಗಿದ್ದಾರೆ.