ಕಲಬುರ್ಗಿ: ಕೆ ಆರ್ ಐ ಡಿ ಎಲ್ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
Update: 2023-05-31 07:35 GMT
ಕಲಬುರ್ಗಿ: ಕೆ ಆರ್ ಐ ಡಿ ಎಲ್ ಕಲಬುರಗಿ ಮತ್ತು ಕೊಪ್ಪಳದ ಇಂಚಾರ್ಜ್ ಸುಪರಿಡೆಂಟ್ ಇಂಜನಿಯರ್ ಮನೆ ಮತ್ತು ಕಚೇರಿ ಮೇಲೆ ದಾಳಿ ಕಲಬುರಗಿ ಮತ್ತು ಕೊಪ್ಪಳ ಲೋಕಾಯುಕ್ತರಿಂದ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ.
ಕಲಬುರಗಿ ಮಗರದ ಜಯನಗರದಲ್ಲಿರುವ ಝರಣಪ್ಪ ಚಿಂಚೋಳಿಕರ್ ನಿವಾಸದ ಮೇಲೆ ದಾಳಿ ನಡೆದಿದೆ.
ಲೋಕಾಯುಕ್ತ ಡಿ ವೈ ಎಸ್ ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಲಬುರಗಿ ನಗರದ ಲಕ್ಷ್ಮೀ ನಗರದ ಹೊಸ ಮನೆ ನಿರ್ಮಾಣದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.