VIDE0- ಚಾಮರಾಜನಗರ: ಸಫಾರಿ ವೇಳೆ ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸಾಹಿತಿ ಭಗವಾನ್ !

Update: 2023-06-04 12:56 GMT

ಚಾಮರಾಜನಗರ: ಸಾಹಿತಿ ಕೆ.ಎಸ್‌.ಭಗವಾನ್ ಹಾಗೂ ಇತರರು ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ವಲಯದಲ್ಲಿ ಸಫಾರಿ  ಮಾಡುತ್ತಿದ್ದ ಸಂದರ್ಭದಲ್ಲಿ ಆನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ವರದಿಯಾಗಿದೆ. 

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಭಗವಾನ್ ಅವರು ಸೇರಿ 8 ಮಂದಿ ಸಫಾರಿಗೆ ಹೋಗಿದ್ದರು ಎಂದು ಹೇಳಲಾಗಿದೆ. ಅದೃಷ್ಟವಶಾತ್ ಸಫಾರಿ ಜೀಪ್‌ನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. 

Full View

Similar News