ಕಾನೂನು ನಿಮ್ಮ ಜೇಬಲ್ಲಿ ಇದೆಯಾ: ಸಚಿವ ಎಂ.ಬಿ.ಪಾಟೀಲ್ ಗೆ ನಟ ಜಗ್ಗೇಶ್ ಪ್ರಶ್ನೆ
ಬೆಂಗಳೂರು, ಜೂ. 5: ‘ರಾಜ್ಯದಲ್ಲಿ ಸೌಹಾರ್ದ ಕದಡಿಡುವ ಕೆಲಸ ಮಾಡಿದರೆ ಜೈಲು ಕಂಬಿ ಎಣಿಸುವಂತೆ ಮಾಡುತ್ತೇವೆ’ ಎಂದು ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ ನೀಡಿದ್ದ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ನಟ, ರಾಜ್ಯಸಭೆಯ ಬಿಜೆಪಿ ಸದಸ್ಯ ಜಗ್ಗೇಶ್ ಆಕ್ಷೇಪಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಜಗ್ಗೇಶ್, ‘ಮಾನ್ಯ ಸಚಿವರೇ ಕಾನೂನು ನಿಮ್ಮ ಜೇಬಲ್ಲಿ ಇದೆಯಾ? ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಸೂಲಿಬೆಲೆ ಅವರ ಬೆನ್ನಿಗೆ’ ಎಂದು ಹೇಳಿದ್ದಾರೆ.
‘ಸೂಲಿಬೆಲಿ ಅವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ ತತ್ವ ವಿಚಾರ, ಕೆರೆ-ಕಟ್ಟೆ ಪುನರ್ಜೀವನ, ಪ್ರವಚನದಂತ ಸಾತ್ವಿಕ ಚಿಂತಕ. ಅವರನ್ನು ಜೈಲಿಗೆ ಹಾಕುವೆ ಎಂದರೆ ಗೆದ್ದು ತಿಂಗಳಿಗೆ ಈ ಮಾತು ಸಚಿವ ಎಂ.ಬಿ.ಪಾಟೀಲ್ ಬಾಯಲ್ಲಿ!’ ಎಂದು ಜಗ್ಗೇಶ್ ಟೀಕಿಸಿದ್ದಾರೆ.
ಸೂಲಿಬೆಲಿ ರವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ ತತ್ವ ವಿಚಾರ,ಕೆರೆಕಟ್ಟೆ ಪುನರ್ಜೀವನ,ಪ್ರವಚನದಂತ ಸಾತ್ವಿಕ ಚಿಂತಕ ಅವರನ್ನು ಜೈಲಿಗೆ ಹಾಕುವೆ ಎಂದರೆ ಅಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಸನ್ಮಾನ್ಯ MBಪಾಟೀಲ್ ಬಾಯಲ್ಲಿ!
— ನವರಸನಾಯಕ ಜಗ್ಗೇಶ್ (@Jaggesh2) June 5, 2023
ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯ?ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ!