ದಾವಣಗೆರೆ: ವಿಷ ಸವರಿ ಇಟ್ಟಿದ್ದ ಹಣ್ಣು ತಿಂದು ವಿದ್ಯಾರ್ಥಿನಿ ಮೃತ್ಯು

Update: 2023-06-10 06:35 GMT

ದಾವಣಗೆರೆ, ಜೂ.10: ಮನೆಯೊಂದರಲ್ಲಿ ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟಿದ್ದ ಹಣ್ಣೊಂದು ಆಕಸ್ಮಿಕವಾಗಿ ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಶುಕ್ರವಾರ ನಡೆದಿರುವುದು ವರದಿಯಾಗಿದೆ.

ಎಚ್.ಐಶ್ವರ್ಯಾ (21) ಮೃತಪಟ್ಟ ಯುವತಿ. ಇವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎ ವಿದ್ಯಾರ್ಥಿನಿಯಾಗಿದ್ದರು.

ಐಶ್ವರ್ಯಾರ ಮನೆಯಲ್ಲಿ ಇಲಿಗಳ ಕಾಟ ವಿಪರೀತವಾಗಿದ್ದರಿಂದ ಅವುಗಳನ್ನು ಸಾಯಿಸುವ ಉದ್ದೇಶದಿಂದ ಮನೆಯವರು ಹಣ್ಣೊಂದಕ್ಕೆ ಇಲಿ ಪಾಷಾಣ ವಿಷ ಸವರಿ ಇಟ್ಟಿದ್ದರೆನ್ನಲಾಗಿದೆ. ಆದರೆ ಇದು ಇಲಿ ಸಾಯಿಸಲು ಇಟ್ಟ ಹಣ್ಣೆಂದು ತಿಳಿಯದ ಐಶ್ವರ್ಯಾ ಅದನ್ನು ತಿಂದಿದ್ದಾರೆ ಎನ್ನಲಾಗಿದೆ.  ಹಣ್ಣು ತಿಂದ ಕೂಡಲೇ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಐಶ್ವರ್ಯಾರನ್ನು  ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News