×
Ad

ಹೊಂದಾಣಿಕೆ ರಾಜಕಾರಣ ಆರೋಪ; ಸಂಸದ ಪ್ರತಾಪ್​ ಸಿಂಹಗೆ ಬೊಮ್ಮಾಯಿ ತಿರುಗೇಟು

Update: 2023-06-15 15:36 IST

ಬೆಂಗಳೂರು: 'ಕಾಂಗ್ರೆಸ್​, ಬಿಜೆಪಿಯ ಕೆಲವು ನಾಯಕರಲ್ಲಿ ಹೊಂದಾಣಿಕೆ ರಾಜಕಾರಣ ಇದೆ' ಎಂಬ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಜೀವನದಲ್ಲಿ ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನನಗೆ ಹೊಂದಾಣಿಕೆ ರಾಜಕಾರಣ ಮಾಡುವ ಅವಶ್ಯಕತೆಯೇ ಇಲ್ಲ'' ಎಂದು ಹೇಳಿದರು. 

''ಶಾಮನೂರು, ನಾವು ಹಳೆಯ ಸ್ನೇಹಿತರು, ಹೀಗಾಗಿ ಭೇಟಿಯಾಗಿದ್ದೆವು. ಈಗಾಗಲೇ ಮಾತನಾಡಿದವರಿಗೂ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ'' ಎಂದು ತಮ್ಮದೇ ಪಕ್ಷದ ಪ್ರತಾಪ್​ ಸಿಂಹಗೆ ತಿರುಗೇಟು ನೀಡಿದರು. 

Similar News