ಸುಸೂತ್ರವಾಗಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ
Update: 2025-12-07 23:14 IST
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರವಿವಾರ ರಾಜ್ಯಾದ್ಯಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025(ಟಿಇಟಿ) ಸುಸೂತ್ರವಾಗಿ ನಡೆದಿದ್ದು, ಪತ್ರಿಕೆ-1ರಲ್ಲಿ ಶೇ. 93.35, ಪತ್ರಿಕೆ-2ರಲ್ಲಿ ಶೇ. 94.79 ಮಂದಿ ಹಾಜರಾಗಿದ್ದಾರೆ.
ಪತ್ರಿಕೆ-1ಕ್ಕೆ 85,042 ಮಂದಿ ನೋಂದಣಿ ಮಾಡಿಕೊಂಡಿದ್ದು, 79,394 ಮಂದಿ ಪರೀಕ್ಷೆ ಬರೆದಿದ್ದಾರೆ. ಪತ್ರಿಕೆ-2ಕ್ಕೆ 2,50,189 ಮಂದಿ ನೋಂದಣಿ ಮಾಡಿಕೊಂಡಿದ್ದು, 2,37,164 ಮಂದಿ ಪರೀಕ್ಷೆ ಬರೆದಿದ್ದಾರೆ.