ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕರ್ನಾಟಕದ ಅಭಿವೃದ್ಧಿಗೆ ಕೊಡುಗೆಗಳೆ ಇಲ್ಲ: ಸುನಿಲ್ ಕುಮಾರ್

Update: 2024-04-19 15:27 GMT

ಕಾರ್ಕಳ : ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕರ್ನಾಟಕದ ಅಭಿವೃದ್ಧಿ ಗೆ ಕೊಡುಗೆಗಳೆ ಇಲ್ಲ ಎಂದು  ಬಿಜೆಪಿ ರಾಜ್ಯ ಚುನಾವಣಾ ಸಂಚಾಲಕ ವಿ ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳ  ವಿಕಾಸ ಕಚೇರಿಯಲ್ಲಿ ನಡೆದ ಬಿಜೆಪಿ ಪಕ್ಷದ ಪಂ. ಸದಸ್ಯರ  ಸಭೆಯಲ್ಲಿ ಮಾತನಾಡಿದರು.

ಒಂದು  ಅಂಗನವಾಡಿಯು ನಿರ್ಮಾಣ ಮಾಡಿಲ್ಲ, ಸಂದ್ಯಾ ಸುರಕ್ಷಾ, ವಿಧವಾ ವೇತನ  ಪಿಂಚಣಿಯನ್ನು ರಾಜ್ಯ ಸರಕಾರವು ನಿಲ್ಲಿಸಿದೆ. ನೂರು ಸುಳ್ಳು ಹೇಳಿ ಒಂದು ಸತ್ಯ ಹೇಳಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀ ನಿವಾಸ ಪೂಜಾರಿ ಮಾತನಾಡಿ ರಾಷ್ಟ್ರದ ಬಲವರ್ಧನೆಗೆ ಮುಖ್ಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ನಾಯಕತ್ವವಿಲ್ಲ . ಆದರೆ ಬಿಜೆಪಿ ಗೆ ನರೇಂದ್ರ ಮೋದಿಯ ನಾಯಕತ್ವವವೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಕ್ಷೇತ್ರದಾದ್ತಕ್ಷ  ನವೀನ್ ನಾಯಕ್ ಪ್ರಸ್ತಾವಿಕ ಮಾತನಾಡಿದರು. ಸಭೆಯಲ್ಲಿ   ಬಿಜೆಪಿ ಮುಖಂಡರಾದ ಮಣಿರಾಜ  ಶೆಟ್ಟಿ, ಮಹಾವೀರ ಹೆಗ್ಡೆ, ಸುಮಿತ್ ಕೌಡೂರು , ಉದಯ ಎಸ್ ಕೋಟ್ಯಾನ್,  ರೇಷ್ಮಾ ಉದಯ್ ಶೆಟ್ಟಿ, ಬೋಳ ಜಯರಾಂ ಸಾಲ್ಯಾನ್ ಉಪಸ್ಥಿತರಿದ್ದರು. ‌ ಹರ್ಷವರ್ಧನ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News