ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಗರ ಯುವ ಘಟಕ ಪದಾಧಿಕಾರಿಗಳ ಆಯ್ಕೆ
Update: 2025-04-26 23:34 IST
ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹಿರೇಮಠ ಮತ್ತು ಜಿಲ್ಲಾ ಯುವ ಅಧ್ಯಕ್ಷರಾದ ಉದಯ ಪಾಟೀಲ ಆದೇಶದ ಮೇರೆಗೆ ಕಲಬುರಗಿ ನಗರ ಯುವ ಘಟಕಗಳ ಪದಾಧಿಕಾರಿಗಳನ್ನು 2024-29ರ ಅವಧಿಗೆ ನೇಮಕ ಮಾಡಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರ ಯುವ ಘಟಕ ಅಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ತಿಳಿಸಿದ್ದಾರೆ.
(ದತ್ತು ಪಾಟೀಲ ಗೌಡಗೌಂವ ಮಂಜುನಾಥ ಕಾಳೆ, ಸಂತೋಷ ನಂದ್ಯಳ, ಸಿದ್ದು ತುಪ್ಪದ, ಮಂಜುನಾಥ ಜೆ.ಹುಲಿ, ಪ್ರಶಾಂತ ರೆಡ್ಡಿ, ಸಚಿನ್ ನಂದ್ಯಳ, ಶರಣಪ್ಪ ಅವಂಟಿಗಿ ಉಪಾಧ್ಯಕ್ಷರು), (ಲಿಂಗರಾಜ ಈಶ್ವರಪ್ಪ ಭಾವಿಕಟ್ಟಿ ಪ್ರಧಾನ ಕಾರ್ಯದರ್ಶಿ), (ಪ್ರಭವ ಕೆ. ಪಟ್ಟಣಕರ್ ಕಾರ್ಯದರ್ಶಿ), (ಮಹಾಂತೇಶ್ ರೋಜೆ ಸಂಘಟನಾ ಕಾರ್ಯದರ್ಶಿ), (ಮಹಾದೇವ ಶಹಾಬಾದಿ ಸಹ ಕಾರ್ಯದರ್ಶಿ), (ಮಂಜುನಾಥ ಅಣಕಲ್ ಖಜಾಂಚಿ) ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಮುಖoಡರು ಇದ್ದರು.