×
Ad

ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ

Update: 2025-09-29 20:21 IST

ಕಲಬುರಗಿ: ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹೇಳಿದರು.

ರವಿವಾರ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದ ಸೇಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕಲಬುರಗಿ ಜಿಲ್ಲೆಯ 10 ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ,ಪದವಿ, ಸ್ನಾತಕೋತ್ತರ ಪದವಿಯ 75 ಶಿಕ್ಷಕರಿಗೆ ಅವರ ಸೇವೆಯನ್ನು ಗುರುತಿಸಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇವತ್ತಿನ ಕಾರ್ಯಕ್ರಮ ತುಂಬಾ ಶಿಸ್ತಿನಿಂದ ಹಾಗೂ ಜವಾಬ್ದಾರಿಯಿಂದ ನಿರಗುಡಿ ಸರ್, ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಡಾ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ್ ಅವರು ಮಾತನಾಡುತ್ತಾ, ಮಕ್ಕಳ ಸಮಗ್ರ ವಿಕಾಸಕ್ಕೆ ಶಿಕ್ಷಕನೆ ಕಾರಣ. ಶಿಕ್ಷಕ ಮಾನವ ಜನಾಂಗಕ್ಕೆ ದಾರಿ ದೀಪ ಎಂದರು.

ಸೋಮಶೇಖರ್ ಗೋಯನಾಯಕ ಮಾತನಾಡಿ, ತಂದೆ ತಾಯಿ ಮಗುವಿಗೆ ಭೌತಿಕ ದೇಹಕ್ಕೆ ಜೀವ ಕೊಟ್ಟರೆ ಶಿಕ್ಷಕ ಬೌದ್ಧಿಕ ಪ್ರಗತಿಗೆ ಅಡಿಪಾಯ ಆಗಿದ್ದಾನೆ. ಅಜ್ಞಾನ ಅಂಧಕಾರದಿಂದ ಬೆಳಕಿನ ಕಡೆ ಕೊಂಡೊಯ್ಯುವ ವ್ಯಕ್ತಿ ಶಿಕ್ಷಕನಾಗಿದ್ದಾನೆ ಎಂದು ಹೇಳಿದರು.

ವೇದಿಕೆಯ ಮೇಲೆ ಶರಣಬಸವ ವಿಶ್ವವಿದ್ಯಾಲಯದ ಡಾ.ಲಕ್ಷ್ಮಿ ಪಾಟೀಲ್ ಮಾಕಾ, ಸೆಂಟ್ ಮೇರಿ ಚರ್ಚ್ ನ ಫಾದರ್ ಪ್ರವೀಣ್ ಹಾಗೂ ಸಿಪಿಐ ಮಾಂತೇಶ್ ಪಾಟೀಲ್ ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಯ್ಯ ಗುತ್ತೇದಾರ್ ವಹಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಮಾರಂಭದಲ್ಲಿ 75 ಶಿಕ್ಷಕರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಡಾ. ಶರಣಬಸಪ್ಪ ವಡ್ಡನಕೇರಿ ಮಾಡಿದರು.

ಡಾ ಚಿ.ಸಿ. ನಿಂಗಣ್ಣ ವಂದಿಸಿದರು. ಕಿರಣ್ ಪಾಟೀಲ್ ಪ್ರಾರ್ಥಿಸಿದರು.

ಡಾ. ರಾಜಶೇಖರ್ ಮಾಂಗ್ ಹಾಗೂ ಗೋದಾವರಿ ಪಾಟಿಲ್ ಗೀತ ಗಾಯನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಿವಾನಂದ ಖಜೂರಿ ಡಾ. ಪ್ರಹ್ಲಾದ್ ಬುರ್ಲಿ, ಡಾ. ವಿಜಯಕುಮಾರ್ ಪರುತೆ, ರೇವಣಸಿದ್ದಪ್ಪ ದುಃಖಾನ್, ಡಾ ಆನಂದ್ ಸಿದ್ದಾಮಣಿ, ಸಿದ್ದರಾಮ ಬೇತಾಳೆ,ಶಿವಶರಣಪ್ಪ ಉದನೂರ್, ಅಂಬಾರಾಯ ಕೋಣೆ, ಬಿಎಸ್ ಮಾಲಿಪಾಟೀಲ್, ನಾಗಲಿಂಯ್ಯ ಮಠಪತಿ, ಮಲ್ಲಿಕಾರ್ಜುನ್ ಪಾಲಮಾರ್, ಸಿದ್ದಪ್ಪ ತಳ್ಳಳ್ಳಿ ರಾಜೇಂದ್ರ ಜಳಕಿ, ಎಸ್. ಎಸ್ ಹೂಗಾರ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News