×
Ad

ಕಲಬುರಗಿ | ನ್ಯಾಯದಾನ ಮಾಡುವ ಕೈಗಳಿಂದ ಪಕ್ಷಿಗಳಿಗೆ ನೀರು ದಾನ

Update: 2025-02-25 21:41 IST

ಕಲಬುರಗಿ : ನಗರದ ಉಚ್ಚ ನ್ಯಾಯಾಲಯ ಪೀಠದ ಆವರಣದಲ್ಲಿಗೌರವಾನ್ವಿತ ನ್ಯಾಯಮೂರ್ತಿಗಳಾದ ಎಸ್.ಸುನಿಲ್ ದತ್ ಯಾದವ್, ಆರ್.ನಟರಾಜ್, ಎಸ್.ವಿಶ್ವಜಿತ್ ಶೆಟ್ಟಿ, ಜೆ.ಎಮ್.ಖಾಜಿ, ಸಿ.ಎಮ್. ಜೋಶಿ, ರಾಜೇಶ ರೈ.ಕೆ. ಇವರುಗಳು ಬೇಸಿಗೆ ದಿನದ ಅಂಗವಾಗಿ ಪಕ್ಷಿಗಳಿಗೆ ಮಣ್ಣಿನ ಮಡಿಕೆಯಲ್ಲಿ ನೀರು ಉಣಿಸುವ ಕಾರ್ಯ ನಡೆಸಿದರು.

ಈ ಸಂದರ್ಭದಲ್ಲಿ ವಕೀಲರು, ಬೇಸಿಗೆಯಲ್ಲಿ ಪಶು- ಪಕ್ಷಿಗಳಿಗೆ ನೀರುಣಿಸುವ ಕುರಿತು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮೇಲೆ ಬೆಕ್ಕುಗಳಿಗೆ ಸಿಗದ ಹಾಗೆ ಮಣ್ಣಿನ ಪಾತ್ರೆಗಳನ್ನು ಇಟ್ಟು ಪಕ್ಷಿಗಳಿಗೆ ನೀರು ಹಾಕಬೇಕೆಂದು ಹೇಳಿದರು.

ಈ ಹಿಂದೆ ಹಳ್ಳ-ಕೊಳ್ಳಗಳು ತುಂಬಿ ಕೆರೆ, ಬಾವಿಗಳಲ್ಲಿ ನೀರು ಇರುತ್ತಿತ್ತು. ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಬೋರವೆಲ್ ಹಾಕುವುದರಿಂದ, ಹಳ್ಳ-ಕೊಳ್ಳಗಳು, ಕೆರೆ - ಬಾವಿಗಳು ಬತ್ತಿಹೋಗಿವೆ. ಬೇಸಿಗೆಯಲ್ಲಿ ನೀರಿನ ಹಾಹಾಕಾರವಾಗಿ ಪಕ್ಷಿಗಳಿಗೆ ನೀರು ಸಿಗದಂತಾಗಿದೆ. ಮನುಷ್ಯರು ತಮಗೆ ಹಸಿವು ಮತ್ತು ನೀರಿನ ದಾಹ ಆದಾಗ ಮತ್ತೊಬ್ಬರಿಂದ ಕೇಳಿ ಪಡೆಯುತ್ತಾರೆ. ಮೂಕ ಪಕ್ಷಿಗಳು/ಬಾನಾಡಿಗಳು ಕೇಳುವುದಕ್ಕೆ ಆಗುವುದಿಲ್ಲ. ಅದನ್ನು ತಿಳಿದು ನಾವು ಮಾನವೀಯತೆಯಿಂದ ನೀರು ಹಾಕುವ ವ್ಯವಸ್ಥೆಯನ್ನು ನಮ್ಮ ನಮ್ಮ ಮನೆಯ ಮೇಲೆ ಮಾಡಬೇಕು. ಇದರಿಂದ ಪುಣ್ಯ ಬರುತ್ತದೆ ಎಂದು ಹೇಳಿದರು.

ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಿರಿಯ ವಕೀಲರಾದ ಎಸ್.ಜಿ.ಮಠ ರವರು ಮಣ್ಣಿನ ಮಡಿಕೆಗಳನ್ನು ಪೂರೈಸುವ ವ್ಯವಸ್ಥೆ ಮಾಡಿದರು.

ಈ ಸಮಾರಂಭದಲ್ಲಿ ಕಾರ್ಯಕ್ರಮ ಸಂಯೋಜಕರಾದ ನ್ಯಾಯವಾದಿ ಶರಣಬಸಯ್ಯ ಜಿ ಮಠ ಸೇರಿದಂತೆ ಉಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುವ ಕಲಬುರಗಿ ವಕೀಲರ ಸಂಘದ ಸದಸ್ಯರು, ಸರಕಾರಿ ವಕೀಲರು ಮತ್ತು ಉಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಯವರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News