ಕಲಬುರಗಿ | ಗಾಂಜಾ ಮಾರಾಟ : ನಾಲ್ವರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
ಕಲಬುರಗಿ: ಮಹಾರಾಷ್ಟ್ರದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಇದ್ದ 48 ಸಾವಿರ ರೂ. ಮೌಲ್ಯದ 3ಕೆಜಿ ಗಾಂಜಾ ಹಾಗೂ 4 ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಬ್ರಹ್ಮಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಆಳಂದ ತಾಲೂಕಿನ ತಡಕಲ್ ಗ್ರಾಮದ ಶ್ರೀಕಾಂತ್ ಮಲ್ಲಪ್ಪ ಸಿರಸೆ, ಮಹಗಾಂವ್ ಕ್ರಾಸ್ ಸಮೀಪದ ನಿವಾಸಿ ರೋಶನ್ ಪಂಡಿತ್, ಕಲಬುರಗಿ ನಗರದ ಗೊಲ್ಲರಗಲ್ಲಿ ನಿವಾಸಿ ದುರ್ಗೆಶ್ ಶಂಕರ್ ಮತ್ತು ತಡಕಲ್ ಗ್ರಾಮದ ಸಿದ್ಧರಾಮ ಪೂಜಾರಿ ಎಂದು ಗುರುತಿಸಲಾಗಿದೆ.
ಗಾಂಜಾವನ್ನು ಮಹಾರಾಷ್ಟ್ರದ ಉಮ್ಮರ್ಗಾದ ಕುರಂದವಾಡಿಯ ಬೀಶನ್ ಬಲಭೀಮ್ ಚನಕಾಪುರೆ ಎಂಬಾತನ ಬಳಿ ಆರೋಪಿಗಳನ್ನು ಖರೀದಿಸಿ ನಗರದ ವಿವಿಧೆಡೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ನಿಖರ ಮಾಹಿತಿ ಮೇರೆಗೆ ಬ್ರಹ್ಮಪುರ ಪೊಲೀಸರು, 48 ಸಾವಿರ ರೂ. ಮೌಲ್ಯದ 3 ಕೆಜಿ ಗಾಂಜಾ ಹಾಗೂ 4 ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.