ಕಲಬುರಗಿ | ಹಾವು ಕಚ್ಚಿ ಯುವಕ ಮೃತ್ಯು
Update: 2025-07-12 18:16 IST
ಕಲಬುರಗಿ: ಹಾವು ಕಚ್ಚಿ ಯುವ ರೈತನೋರ್ವ ಮೃತಪಟ್ಟಿರುವ ಘಟನೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಯಲ್ಲಾಲಿಂಗ ಬಸಪ್ಪ ಮಂದೇವಾಲ (22) ಎಂದು ಗುರುತಿಸಲಾಗಿದೆ.
ಯುವ ರೈತ ಯಲ್ಲಾಲಿಂಗ, ಹೊಲದಲ್ಲಿ ವಿಶ್ರಾಂತಿಗೆಂದು ಮಲಗಿದ್ದಾಗ ಹಾವು ಕಚ್ಚಿದೆ ಎಂದು ತಿಳಿದುಬಂದಿದೆ.
ಈ ಕುರಿತು ನೆಲೋಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.