×
Ad

ಕಲಬುರಗಿ ಕಸಾಪದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ : ವೀರ ಸ್ತ್ರೀ ಪ್ರಶಸ್ತಿ ಪ್ರದಾನ

Update: 2025-10-26 19:34 IST

ಕಲಬುರಗಿ: ಸ್ವಾತಂತ್ರ್ಯ ಚಳವಳಿಯ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಳ ತ್ಯಾಗ, ಶೌರ್ಯ ಮತ್ತು ಜೀವನಾದರ್ಶಗಳನ್ನು ಇಂದಿನ ಮಹಿಳೆಯರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ತಹಾಶೀಲ್ದಾರ್ ಸಾವಿತ್ರಿ ಶರಣು ಸಲಗರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಹಾಗೂ ವೀರ ಸ್ತ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ ಮನೆತನದ ಸಂರಕ್ಷಣೆ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಚೆನ್ನಮ್ಮಳ ಹೋರಾಟದ ಬದುಕು ಇಂದಿಗೂ ಪ್ರಸ್ತುತವಾಗಿವೆ. ಇಂಥ ವೀರ ಮಹಿಳೆಯ ಹೆಸರಲ್ಲಿ ಪ್ರಶಸ್ತಿ ಕೊಡುತ್ತಿರುವ ಪರಿಷತ್ತಿನ ಕಾರ್ಯ ಸ್ವಾಗರ್ಹತವಾಗಿದೆ. ಮಹಿಳೆಯರು ಯಾವುದೇ ಸಂಕೋಚ ಪಡಬಾರದು. ಧೈರ್ಯದಿಂದ ಮುನ್ನಡೆ ಜೀವನ ಸಾಗಿಸುವಂತೆ ಸ್ತ್ರೀಯರಿಗೆ ಕರೆ ನೀಡಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗಬಾರದು. ಮಹಿಳೆಯರ ಮೇಲೆ ಸಮಾಜದಲ್ಲಿ ಸಾಕಷ್ಟು ಹೊಣೆಗಾರಿಕೆಯಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಢಿಸಿಕೊಂಡು ಸಮರ್ಥವಾಗಿ ಕುಟುಂಬಗಳ ನಿರ್ವಹಣೆ ಮಾಡಬೇಕು ಎಂದರು.

ಯಾದಗಿರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಮಾಲತಿ ರೇಷ್ಮಿ, ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಅನ್ನಪೂರ್ಣ ಸಂಗೋಳಗಿ, ಶಕುಂತಲಾ ಪಾಟೀಲ ಜಾವಳಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಮಾಲಾ ದಣ್ಣೂರ ಮಾತನಾಡಿದರು.

ಈ ವೇಳೆ ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ಮಾಣಿಕಮ್ಮಾ ಜಮಾದಾರ, ವಿಶಾಲಾಕ್ಷಿ ಮಾಯಣ್ಣವರ್, ಕವಿತಾ ಕಾವಳೆ, ಜಯಶ್ರೀ ಯಾದಗಿರಿ, ವೆಂಕುಬಾಯಿ ರಜಪೂತ, ಸುಕನ್ಯಾ ಕುಮಸಿ, ಕವಿತಾ ದೇಗಾಂವ, ಭಾಗ್ಯಶ್ರೀ ಮರಗೋಳ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಬಾಳಿ, ಎಂ.ಎನ್. ಸುಗಂಧಿ, ಧರ್ಮರಾಜ ಜವಳಿ, ರವಿಕುಮಾರ ಶಹಾಪೂರಕರ್, ಸಂತೋಷ ಕುಡಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ದಿನೇಶ ಮದಕರಿ, ಜೆ.ಎಸ್. ವಿನೋದಕುಮಾರ, ಶಿವಾನಮದ ಸುರವಸೆ, ಡಾ. ಶ್ರೀಶೈಲ ನಾಗರಾಳ, ವೀರೇಂದ್ರಕುಮಾರ ಕೊಲ್ಲೂರ, ಸಂದೇಶ ಕಮಕನೂರ, ಸೇರಿದಂತೆ ಅನೆಕರು ಉಪಸ್ಥಿತರಿದ್ದರು.

ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಾಜಿ ಉಪ ಮೇಯರ್ ನಾಗವೇಣಿ ತಿಪ್ಪಣಪ್ಪ ಕಮಕನೂರ, ಜೆಸ್ಕಾಂ ನ ಎಇಇ ಮಾಲಿನಿ ಸ್ವಾಮಿ, ಶರಣ ಚಿಂತಕಿ ಶಾರದಾ ಓಗಿ, ಕನ್ನಡಪರ ಚಿಂತಕಿ ಫಾತೀಮಾ ಶೇಖ್, ಎಂ.ಆರ್.ಎಂ.ಸಿ. ಪ್ರಾಧ್ಯಾಪಕಿ ಡಾ. ಶಾಂತಾ ಬಿ ಪಾಟೀಲ, ಚಿತ್ತಾಪೂರ ಪುರಸಭೆ ಸದಸ್ಯೆ ಶೀಲಾ ಬಾಬು ಕಾಶಿ, ಸಮಾಜ ಸೇವಕಿ ಸುಮಾ ಶರಣು ಪಪ್ಪಾ, ಜನಪರ ಹೋರಾಟಗಾರ್ತಿ ಚಂದಮ್ಮ ಗೋಳಾ ಅವರನ್ನು ವೀರ ಸ್ತ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News